ಸೋಮವಾರ ಶ್ರೀಗಳ ದರ್ಶನಕ್ಕೆ ಆಗಮಿಸಿದ್ದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕಸುರೇಶ್ ಕುಮಾರ್ ಮಾತನಾಡಿ "ಸ್ವಾಮೀಜಿ ವೈಯಕ್ತಿಕವಾಗಿ ಲಿಂಗಾಯತ ಹಾಗೂ ವೀರಶೈವ ಎಂಬ ಬೇಧವನ್ನು ಕಾಣಲು ಬಯಸಿರಲಿಲ್ಲ.ಅದು ಅವರಿಗಿಷ್ಟವಿರಲಿಲ್ಲ.ಆದಾಗ್ಯೂ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಿದ್ದಗಂಗಾ ಶ್ರೀಗಳ ಒಪ್ಪಿಗೆ ಇದೆ ಎಂಬ ಊಹಾಪೋಹದ ವರದಿಗಳು ಹರಿದಾಡಿದ್ದವು. ವಾಸ್ತವದಲ್ಲಿ, ಅದು ನಿಜವಲ್ಲ. ನಂತರ ಮಠವೇ ಈ ಕುರಿತಂತೆ ಸ್ಪಷ್ಟನೆ ನೀಡಿತ್ತು.ಅವರು ತಟಸ್ಥ ನಿಲುವನ್ನುತಾಳಿದ್ದರು" ಎಂದರು.