ಪೋಲೀಸರ ಭೇಟಿ ಬಗ್ಗೆ ಮಾಹಿತಿ ಪಡೆಯಲು ನಾರಾಯಣ ಗೌಡ ಪ್ರಯತ್ನಿಸಿದಾಗ ಮೊದಲು ನಿರ್ಲಕ್ಶಿಸಿದ ಸಿದ್ದಪ್ಪ ಬಳಿಕ ಹೊಸದೊಂದು ದೃಶ್ಯವನ್ನೇ ಸೃಷ್ಟಿಸಿದ್ದನು.ಆಗ ಸಿದ್ದಪ್ಪ ನೀವು 50,000 tರು. ನೀಡಿದರೆ ಪ್ರಕರಣ ಮುಚ್ಚಿ ಹಾಕುತ್ತೇವೆ, ಇಲ್ಲವಾದರೆ ನಿಮ್ಮ ಕುಟುಂಬವನ್ನೆಲ್ಲಾ ಠಾಣೆಗೆ ಕರೆಸಬೇಕಾಗುವುದು ಎಂದು ಬೆದರಿಕೆ ಹಾಕಿದ್ದಾನೆ. ಸಿದ್ದಪ್ಪನ ಈ ಬೆದರಿಕೆಗೆ ಮಣಿದ ನಾರಾಯಣ ಗೌಡ ಸದ್ಯ ಐದು ಸಾವಿರ ರು. ನೀಡಿ ಉಳಿದ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿ ತರುತ್ತೇನೆ ನೀವು ನಮ್ಮ ಮನೆ ಸಮೀಪವೇ ಕಾಯುತ್ತಿರಿ ಎಂದು ಹೇಳಿದ್ದಾರೆ.