ಧಾರವಾಡ: ಗಣರಾಜ್ಯೋತ್ಸವಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹರಿದ ಕಾರು, 9 ಮಂದಿಗೆ ಗಾಯ!
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದಾಗ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಕಾರು ಹರಿದು ಐವರು ವಿದ್ಯಾರ್ಥಿಗಲು ಹಾಗೂ ಓರ್ವ ಶಿಕ್ಷಕ ಗಂಭೀರ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಗಣರಾಜ್ಯೋತ್ಸವಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹರಿದ ಕಾರು, 9 ಮಂದಿಗೆ ಗಾಯ!
ಧಾರವಾಡ: ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದಾಗ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಕಾರು ಹರಿದು ಒಂಬತ್ತು ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕ ಗಂಭೀರ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ವಾಟರ್ ಟ್ಯಾಂಕ್ ಸಮೀಪ ಈ ಘಟನೆ ನಡಿದಿದ್ದು ಕೆಇ ಬೋರ್ಡ್ ಶಾಲೆ ಪ್ರಿನ್ಸಿಪಾಲ್ ಸುನಿತಾ ಕಡಪಟ್ಟಿ ಹಾಗೂ ವಿದ್ಯಾರ್ಥಿಗಳಾದ ಪೂಜಾ ನಿಡಗುಂದಿ, ಚೈತ್ರಾ ಕೊಪ್ಪದ, ಅನ್ನಪೂರ್ಣ ಚಲವಾದಿ ಗಾಯಗೊಂಡಿದ್ದಾರೆ.
ಇವರೆಲ್ಲರೂ ಕಾಲೇಜಿನಲ್ಲಿ ನಡೆಯಲಿದ್ದ ಗಣರಾಜ್ಯೋತ್ಸವ ಧ್ವಜಾರೋಹಣಕ್ಕಾಗಿ ತೆರಳುತ್ತಿದ್ದಾಗ ಕಾರೊಂದು ಏಕಾಏಕಿ ನುಗ್ಗಿದೆ. ಒಟ್ಟು ಆರು ಮಂದಿ ಮೇಲೆ ಕಾರು ಹರಿದಿದ್ದು ಗಾಯಾಳುಗಳನ್ನು ಎಸ್ಡಿಎಂ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ಸಂಬಂಧ ಧಾರವಾಡ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.