ಕೇವಲ ಮೈಸೂರು ಮಾತ್ರವಲ್ಲದೇ ಜೆಎಸ್ ಎಸ್ ಮಠದ ಜೊತೆಗೆ ವಿಶೇಷ ನಂಟು ಹೊಂದಿದ್ದರು, ಮೈಸೂರಿಗೆ ಬರುತ್ತಿದ್ದ ವೇಳೆ ಜೆಎಸ್ಎಸ್ ಮಠದಲ್ಲಿ ಉಳಿದುಕೊಳ್ಳಲು ಬಯಸುತ್ತಿದ್ದರು. ಅವರು ರಕ್ಷಣಾ ಸಚಿವರಾಗಿದ್ದ ವೇಳೆ ಹಲವು ಬಾರಿ ಮೈಸೂರಿಗೆ ಭೇಟಿ ನೀಡುತ್ತಿದ್ದರು. ಕಾರು ನಿಲ್ಲಿಸಿ ರಸ್ತೆ ಬದಿಯ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು, ಅಲ್ಲಿ ಟೀ ರೆಡಿ ಇಲ್ಲದಿದ್ದರೇ ಸ್ಥಳೀಯ ರೆಸ್ಟೋರೆಂಟ್ ಗೆ ತೆರಳಿ ಮೈಸೂರಿನ ಕಾಫಿ ರುಚಿ ಸವಿಯುತ್ತಿದ್ದರು.