ನಗರದಲ್ಲಿ ಜನ ಸಂಪರ್ಕ ಸಭೆ ನಡೆಸಲು ಗೃಹ ಸಚಿವರು ಆದೇಶ ಜಾರಿ ಮಾಡಿದ್ದು, ಒಂದೊಂದು ವಿಭಾಗದಲ್ಲಿ ಮಾದರಿ ಜನ ಸ್ನೇಹಿ ಪೊಲೀಸ್ ಠಾಣೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದು ಕೇವಲ ದೂರು ದಾಖಲಿಸುವ ಠಾಣೆಯಾಗಿರದೆ, ಬದಲಿಗೆ ಇಲ್ಲಿ ಜನರಿಗೆ ಪೊಲೀಸರ ಬಗೆಗೆ ಭಯ ಹೋಗಿಸಲು ಉದ್ಯಾನ, ಕುಳಿತುಕೊಳ್ಳಲು ಬೇಂಚ್, ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ಜನರು ಪೊಲೀಸರಿಗೆ ಭಯ ಪಡುವ ಅಗತ್ಯವಿಲ್ಲ. ಸಮಸ್ಯೆಗಳಿದ್ದಲ್ಲಿ ಪೊಲೀಸ್ ಠಾಣೆಗೆ ಬಂದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಬಳಿ ನೇರವಾಗಿ ಬಂದು ಬಗೆಹರಿಸಿಕೊಳ್ಳಬಹುದು. ಈ ಕುರಿತು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಭರವಸೆ ನೀಡಿದರು.