ನಿಂಬೆಹಣ್ಣನ್ನು ಒಳಗಡೆ ತೆಗೆದುಕೊಂಡು ಹೋಗುವುದರಿಂದ ಕೆಲ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಇರಿಸು ಮುರಿಸು ಉಂಟಾಗುತ್ತಿದೆ, ನಿಂಬೆಹಣ್ಣಿನ ಜೊತೆಗೆ ಮೆಣಸಿನಕಾಯಿ ತರುವುದು ಕಂಡು ಬಂದಿತ್ತು, ಇದರಿಂದ ಹಲವು ಜನ ಪ್ರತಿನಿಧಿಗಳು ಆತಂಕಗೊಂಡಿದ್ದರು,. ಹೀಗಾಗಿ ಒಳತರದಂತೆ ತಡೆದು ಚೆಕ್ ಮಾಡುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಆದರೆ ನಿಯಮ ಮುಖ್ಯಮಂತ್ರಿ ಸಹೋದರ ಹಾಗೂ ಸಚಿವ ಎಚ್.ಡಿ ರೇವಣ್ಣ ಗೆ ಅನ್ವಯಿಸುತ್ತದಾ ಎಂಬುದನ್ನು ಕಾದು ನೋಡಬೇಕಿದೆ.