ಮೊನ್ನೆ ಬುಧವಾರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮತ್ತೆ ಕಾಫಿತೋಟ ಸುತ್ತಮುತ್ತ ಕಾಡಾನೆಗಳು ಕಾಣಿಸಿಕೊಂಡಿದ್ದವು. ಪಟಾಕಿಗಳನ್ನು ಸಿಡಿಸಿ ದೊಡ್ಡ ಶಬ್ದ ಮಾಡಿ ಅವುಗಳನ್ನು ಓಡಿಸಲು ನೋಡಿದ್ದರು, ಪಟಾಕಿ ಶಬ್ದಕ್ಕೆ ಕಾಡಾನೆಗಳು ಭೀತಿಯಿಂದ ಓಡಲು ಆರಂಭಿಸಿದವು. ಹೀಗೆ ಓಡುವಾಗ ಒಂದು ಆನೆ ಒದ್ದೆಯಾದ ಕಲ್ಲಿನ ಬಂಡೆಯಿಂದ ಜಾರಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ.