ಬೆಂಗಳೂರು: ರೈಲು ನಿಲ್ದಾಣದಲ್ಲಿ ದೊರೆತಿದ್ದ ಗ್ರೆನೇಡ್ ಭಾರತೀಯ ಸೇನೆಗೆ ಸೇರಿದ್ದು

ಇತ್ತೀಚೆಗಷ್ಟೇ ನಗರದ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ದೊರೆತ ನಿರ್ಜೀವ ಕೈ ಗ್ರೆನೇಡ್ ಮೂಲವನ್ನು ಪತ್ತೆ ಹಚ್ಚುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಸಿಕ್ಕ ಗ್ರೆನೇಡ್
ಬೆಂಗಳೂರಿನಲ್ಲಿ ಸಿಕ್ಕ ಗ್ರೆನೇಡ್
Updated on
ಬೆಂಗಳೂರು: ಇತ್ತೀಚೆಗಷ್ಟೇ ನಗರದ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ದೊರೆತ ನಿರ್ಜೀವ ಕೈ ಗ್ರೆನೇಡ್ ಮೂಲವನ್ನು ಪತ್ತೆ ಹಚ್ಚುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೇ 31ರಂದು ಬಿಹಾರಕ್ಕೆ ತೆರಳಬೇಕಿದ್ದ ಸಂಘಮಿತ್ರಾ ಪಾಟ್ನಾ ಎಕ್ಸ್‌ಪ್ರೆಸ್‌ ನ ಒಂದನೇ ಪ್ಲಾಟ್ ಫಾರ್ಮ್‌, ಎಸ್ 1 ಬೋಗಿಯಲ್ಲಿ ದೇಶೀಯ ಕೈ ಗ್ರೆನೇಡ್‌ ಪತ್ತೆಯಾಗಿದ್ದು, ಇದು ಭಾರೀ ಆತಂಕ ಸೃಷ್ಠಿಸಿತ್ತು.
ಇಂದು ವಿಧಿ ವಿಜ್ಞಾನ ಪ್ರಯೋಗದ ವರದಿ ಪಡೆದ ಪೊಲೀಸರು, ಇದು ಸಾಮಾಜಘಾತುಕ ಚಟುವಟಿಕೆಗಳಿಗಾಗಿ ತಂದಿದ್ದ ಗ್ರೆನೇಡ್ ಅಲ್ಲ. ಬದಲಿಗೆ ಭಾರತೀಯ ಸೇನಾ ಪಡೆಗೆ ಸೇರಿದ ಗ್ರೆನೇಡ್. ಮೇ 30ರಂದು ಮಿಲಿಟರಿ ಯೋಧರ ತರಬೇತಿಗಾಗಿ ಕೊಂಡ್ಯೊಯ್ಯುತ್ತಿದ್ದಾಗ ಸೇನೆಯ ಒಂದು ಬಾಕ್ಸ್ ನಿಂದ ಗ್ರೆನೇಡ್ ಹಳಿ ಮೇಲೆ ಬಿದ್ದಿದೆ. ಬಿದ್ದ ಗ್ರೆನೇಡ್ ಅನ್ನು ಮಿಲಿಟರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಮನಿಸದೇ ಮುಂದೆ ಸಾಗಿದ್ದಾರೆ. ಪರಿಣಾಮ ಪ್ಲಾಟ್ ಫಾಮ್ ನಲ್ಲಿ ಈ ಗ್ರೆನೇಡ್ ದೊರೆತು ಇಷ್ಟೆಲ್ಲ ಆತಂಕಕ್ಕೆ ಕಾರಣವಾಗಿತ್ತು. ಇದೊಂದು ನಿರ್ಜೀವ ಗ್ರೆನೇಡ್ ಎಂದು ಸೇನೆಯ ಬಿಗ್ರೇಡ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com