ಗಿರೀಶ್ ಕಾರ್ನಾಡ್ ವಿಧಿವಶ: ಯಾವುದೇ ವಿಧಿವಿಧಾನಗಳಿಲ್ಲದೆ ಅಂತ್ಯಸಂಸ್ಕಾರ

ಖ್ಯಾತ ಸಾಹಿತಿ, ನಟ ಸಾಂಸ್ಕೃತಿಕ ರಾಯಬಾರಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದು ಅವರ ಅಂತ್ಯಸಂಸ್ಕಾರವನ್ನು ಯಾವ ವಿಧಿವಿಧಾನಗಳಿಲ್ಲದೆ ಬೈಯಪ್ಪನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲಾಗುತ್ತದೆ.
ಗಿರೀಶ್ ಕಾರ್ನಾಡ್
ಗಿರೀಶ್ ಕಾರ್ನಾಡ್
Updated on
ಬೆಂಗಳೂರು: ಖ್ಯಾತ ಸಾಹಿತಿ, ನಟ ಸಾಂಸ್ಕೃತಿಕ ರಾಯಬಾರಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದು ಅವರ ಅಂತ್ಯಸಂಸ್ಕಾರವನ್ನು ಯಾವ ವಿಧಿವಿಧಾನಗಳಿಲ್ಲದೆ ಬೈಯಪ್ಪನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲಾಗುತ್ತದೆ. 
ಕಾರ್ನಾಡ್ ಅವರ ಬಯಕೆಯಂತೆಯೇ ಯಾವುದೇ ಧಾರ್ನಿಕ ವಿಧಿ ವಿಧಾನಗಳಿಲ್ಲದೆ ಅವರ ಅಂತ್ಯ ಸಂಸ್ಕಾರ ನೆರವೇರುತ್ತದೆ ಎಂದು ಅವರ ಕುಟುಂಬದ ಆಪ್ತರಾದ ಕೀಂ ಚೈತನ್ಯ ಹೇಳಿದ್ದಾರೆ.
"ಯಾವ ಸಚಿವರು, ಶಾಸಕರು ಅಥವಾ ಯಾವ ಗಣ್ಯರೂ ಬರುವುದು ಬೇಡ, ಸಾರ್ವಜನಿಕ ದರ್ಶನ ಇರುವುದಿಲ್ಲ" ಎಂದು ಚೈತನ್ಯ ಸ್ಪಷ್ಟಪಡಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಇಂದು (ಸೋಮವಾರ) ಕೊನೆಯುಸಿರೆಳೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com