ತಕ್ಷಣವೇ ಶಿವಕುಮಾರ್ ಅವರ ಸಮ್ಮುಖದಲ್ಲಿ ಎಪಿಆರ್ ಒ ಹಾಗೂ ಸಿಬ್ಬಂದಿ ಕಂದು ಬಣ್ಣದ ಪರ್ಸ್ ಪರಿಶೀಲಿಸಿದಾಗ ಅದರಲ್ಲಿ ಎಟಿಎಂ ಕಾರ್ಡ್, ಪಾನ್ ಕಾರ್ಡ್ , ಆಧಾರ್ ಕಾರ್ಡ್, ಆರ್ ಸಿ ಪುಸ್ತಕ, ಡಿಎಲ್ ಹಾಗೂ ಇನ್ನಿತರ ಮಹತ್ವದ ದಾಖಲಾತಿ ಲಭಿಸಿದ್ದು, ಲೋಕೇಶ್ ಡಿ.ಕೆ ಎಂಬುವವರು ಅದರ ವಾರಸುದಾರರ ಎಂದು ತಿಳಿದು ಬಂದಿತ್ತು. ನಂತರ ಲೋಕೇಶ್ ಡಿ.ಕೆ ಅವರನ್ನು ಸಂಪರ್ಕಿಸಿ ಪರ್ಸ್ ಹಿಂದಿರುಗಿಸಲಾಗಿದೆ. ಶಿವಕುಮಾರ್ ಅವರ ಪ್ರಾಮಾಣಿಕೆತೆಗೆ ನಗರ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.