ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದ್ನನು ವಿಚಾರಿಸುತ್ತೇನೆ, ದಂಡ ಕಟ್ಟಿದ್ದರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಪೂರ್ವ ವಿಭಾಗದ ಡಿಸಿಪಿ ಜಗದೀಶ್ ಹೇಳಿದ್ದಾರೆ. ರೇಂಜ್ ರೋವರ್ ಕಾರು ಸಿಎಂ ಕುಮಾರಸ್ವಾಮಿ ಅವರಿಗೆ ಸೇರಿದ್ದು, ಹಾಗಾಗಿ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಒಂದು ವೇಳೆ ಸ್ವತಃ ಅವರೇ ಬಂದು ದಂಡ ಕಟ್ಟದಿದ್ದರೇ ನಾವೇ ಹೋಗಿ ಕಟ್ಟಿಸಿಕೊಳ್ಳುತ್ತೆವೆ ಎಂದು ತಿಳಿಸಿದ್ದಾರೆ.