ಸಹಾಯಕ ಎಂಜಿನಿಯರ್ ಗಳಾದ ಪಿ ಎಚ್ ಕೊಟಬಾಲ್, ಆರ್ ಡಿ ಯೆಲಿಗಾರ್, ಎಲ್ ಎ ಬ್ಯಾಲಿ, ಎಂ ಬಿ ಮುಡಿಬಸನ್ ಗೌಡರ್, ಗುರುನಾಥ್ ಮತ್ತು ಡಿ ಎಲ್ ಶಾಸ್ತ್ರಿ ಜೂನ್ 29ರಿಂದ ಜುಲೈ 26ರವರೆಗೆ ಒಂದು ತಿಂಗಳು ರಜೆಗೆ ಅರ್ಜಿ ಹಾಕಿದ್ದು ತಾವು ಸಾಮೂಹಿಕ ರಜೆ ಹಾಕಲು ಮೇಲಾಧಿಕಾರಿ ಹಡ್ಲಿಯವರ ಕಿರುಕುಳವೇ ಕಾರಣ ಎಂದು ಈ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ರಜೆ ಅರ್ಜಿಯಲ್ಲಿ ವೈಯಕ್ತಿಕ ಕಾರಣಗಳಿಗೆ ರಜೆ ತೆಗೆದುಕೊಳ್ಳುತ್ತಿರುವುದಾಗಿ ನಮೂದಿಸಿದ್ದಾರೆ.