ಬಂಡೀಪುರದ ಹುಲಿ ಯೋಜನೆಯ ವೃತ್ತ ನಿರ್ದೇಶಕರಾಗಿದ್ದ ಮಾಧವ್ ಅವರು ಸಿಸಿಎಫ್ ಗೆ ವರ್ಗಾವಣೆಯಾಗಿದ್ದಾರೆ. ವಿಶ್ವ ವನ್ಯಮೃಗ ದಿನಾಚರಣೆಯಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಮಾಧವ್, ಉಷ್ಣಾಂಶದಲ್ಲಿ ಹೆಚ್ಚಳ ಮತ್ತು ತೀವ್ರ ಗಾಳಿಯಿಂದಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಕಷ್ಟವಾಯಿತು. ಗಾಳಿಯ ತೀವ್ರತೆ 40 ಕಿಲೋ ಮೀಟರ್ ವೇಗದಲ್ಲಿತ್ತು ಎಂದು ಹೇಳಿದರು.