ಶ್ರೀ ಕೃಷ್ಣಮಠದ ಗರ್ಭಗುಡಿಯ ಮೇಲ್ಛಾವಣಿಗೆ ತನ್ನ ಎರಡು ವರ್ಷದ ಪರ್ಯಾಯ ಅವಧಿಯಲ್ಲಿ ಚಿನ್ನದ ತಗಡುಗಳನ್ನು ಹೊದಿಸುವುದಾಗಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥರು ಮಾಡಿರುವ ಸಂಕಲ್ಪಕ್ಕೆ ಭಕ್ತರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಇದಾಗಲೇ ಶೇ.7ರಷ್ಟು ಚಿನ್ನ ಸಂಗ್ರಹವಾಗಿದೆ.ಉತ್ತಮ ಬಾಳಿಕೆ, ಆಕರ್ಷಕ ಬಣ್ನವನ್ನೂ ಹೊಂದಿರಲು 23 ಕ್ಯಾರೆಟ್ ಚಿನ್ನದಿಂದ ಈ ಫಲಕಗಳನ್ನು ತಯಾರಿಸಲಾಗುತ್ತಿದೆ.