ವಿಜಯಪುರ: ಕಾಲ ಬದಲಾಗಿದೆ, ಹಾಗೆಯೇ ಸಂಸಾರ, ಪತಿ-ಪತ್ನಿಯರ ಬಾಂಧವ್ಯದ ಅರ್ಥ ಸಹ ಬದಲಾಗುತ್ತಿದೆ. ಪಿತೃ ಪ್ರಧಾನವಾಗಿರುವ ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟು ಹೊಸ ಹಾದಿಯಲ್ಲಿ ಸಾಗಿ ಗಂಡು-ಹೆಣ್ಣಿನ ಸಮಾನತೆಯನ್ನು ಸಾರುವ ಪ್ರಯತ್ನಗಳು ನಿರಂತರವಾಗಿದೆ. ಈ ನಡುವೆ ವಿಜಯಪುರದ ಎರಡು ಜೋಡಿ ಒಂದು ಹೆಜ್ಜೆ ಮುಂದೆ ಹೋಗಿ ಹಿಂದೂ ಸಂಪ್ರದಾಯಿಕ ವಿವಾಹದಲ್ಲಿ ಮಾಂಗಲ್ಯ ಧಾರಣೆ ಮಾಡಿಸಿಕೊಳ್ಳಬೇಕಾಗಿರುವ ವಧುಗಳೇ ತಮ್ಮ ಪತಿಯಾಗುವವರಿಗೆ ಮಾಂಗಲ್ಯ(ರುದ್ರಾಕ್ಷಿ) ಕಟ್ಟಿದ್ದಾರೆ!