ಸಂಜೀವ್ ಕುಮಾರ್
ಸಂಜೀವ್ ಕುಮಾರ್

ನೀತಿ ಸಂಹಿತೆ ಉಲ್ಲಂಘನೆ: ರಾಜ್ಯದಲ್ಲಿ 8.53 ಕೋಟಿ ರೂ. ಮೌಲ್ಯದ ಮದ್ಯ, 54 ಲಕ್ಷ ನಗದು ವಶ

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ, ದೇಶಾದಾದ್ಯಂತ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಏರುತ್ತಿದೆ. ಈ ನಡುವೆ ಚುನಾವಣಾ ಆಯೊಗ ನೀತಿ ಸಂಹಿತೆ ಜಾರಿಗೊಳಿಸಿದ್ದು....
Published on
ಬೆಂಗಳೂರು: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ, ದೇಶಾದಾದ್ಯಂತ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಏರುತ್ತಿದೆ. ಈ ನಡುವೆ ಚುನಾವಣಾ ಆಯೊಗ ನೀತಿ ಸಂಹಿತೆ ಜಾರಿಗೊಳಿಸಿದ್ದು ಮತದಾರರಿಗೆ ಹಣ, ಹೆಂಡ ಹಂಚುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.  ಇನ್ನು ಕರ್ನಾಟಕದಲ್ಲಿ ನೀತಿ ಸಂಹಿತೆ ಪಾಲನೆಗಾಗಿ ರಚಿಸಲಾದ ಚುನಾವಣಾಧಿಕಾರಿಗಳ ತಂಡ ಈ ವರೆಗೆ 54 ಲಕ್ಷ ರು. ನಗದು ಹಾಗು 8.53 ಕೋಟಿ ರು. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದೆ.
ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. "ನೀತಿ ಸಂಹಿತೆ ಜಾರಿಯಾದಂದಿನಿಂದ ಇಂದಿನವರೆಗೆ ಕರ್ನಾಟಕದಲ್ಲಿ ವರೆಗೆ 54 ಲಕ್ಷ ರು. ನಗದು ಹಾಗು 8.53 ರು. ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. 650 ಗ್ರಾಂ ಚಿನ್ನ ಹಾಗೂ 40 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದು 1818 ಎಕ್ಸೈಸ್ ಪ್ರಕರಣಗಳನ್ನು ದಾಖಲಿಸಲಾಗಿದೆ."
ನಾಗರಿಕರು ನೀತಿ ಸಂಹಿತೆ ಉಲ್ಲಂಘನೆ ಆಗುವುದನ್ನು ಕಂಡುಬಂದರೆ ತಕ್ಷಣವೇ ಸಿ-ವಿಜಿಲ್ ಮೊಬೈಲ್ ಅಪ್ಲಿಕೇಷನ್ ಬಳಸಿಯೇ ದೂರು ನೀಡಬಹುದಾಗಿದೆ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
"ಸಿ-ವಿಜಿಲ್ ಒಂದು ಆನ್ ಲೈನ್ ಅಪ್ಲಿಕೇಷನ್, ಇದನ್ನು ನಾಗರಿಕರು ಈ ಅಪ್ಲಿಕೇಷನ್ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಕುರಿತು ದೂರು ಸಲ್ಲಿಸಬಹುದು. ಮಾರ್ಚ್ ೧೦ರಿಂದ ಈ ಅಪ್ಲಿಕೇಷನ್ ಚಾಲನೆಯಲ್ಲಿದ್ದು ಇದುವರೀಗೆ ೧೮೬ ದೂರುಗಳ ಸಲ್ಲಿಕೆಯಾಗಿದೆ "ಎಂದೂ ಕುಮಾರ್ ಹೇಳೀದ್ದಾರೆ.
ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಐದು ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಕುಮಾರ್ ಮಾಹಿತಿ ಒದಗಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲಿ ಕೇಂದ್ರ ಚುನಾವಣಾ ಆಯೋಗ ಮಾರ್ಚ್ ೧೦ರಿಂದ ದೇಶಾದ್ಯಂತ ನೀತಿ ಸಂಹಿತೆ ಜಾರಿ ಮಾಡಿದೆ.ಏಪ್ರಿಲ್ ೧೧ರಿಂದ ಮೊದಲ ಹಂತದ ಮತದಾನ ಪ್ರಾರಂಬಗೊಳ್ಳಲಿದ್ದು ಮೇ ೨೩ಕ್ಕೆ ಮತಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com