ಶಿವಮೊಗ್ಗ: ಸಾಗರ ಶಾಸಕ ಹರತಾಳು ಹಾಲಪ್ಪ ಪ್ರಯಾಣಿಸುತ್ತಿದ್ದ ಕಾರು ಶನಿವಾರ ಸಂಜೆ ಅಪಘಾತಕ್ಕೀಡಾಗಿದೆ. ಸಾಗರ ಪಟ್ಟಣದ ಹೊರವಲಯದಲ್ಲಿ ಕಾಸ್ವಾಡಿ ಗ್ರಾಮದ ಸಮೀಪ ಘಟನೆ ವರದಿಯಾಗಿದೆ.
ಅಪಘಾತ ನಡೆಯುವ ವೇಳೆ ಶಾಸಕ ಹಾಲಪ್ಪ ಹಾಗೂ ಅವರ ಆಪ್ತರು ಕಾರಿನಲ್ಲಿದ್ದರು. ಸಂಜೆ 4.30ರ ವೇಳೆಗೆ ಸಾಗರದಿಂದ ಶಿವಮೊಗ್ಗಕ್ಕೆ ಬರುವಾಗ ಕಾರಿಗೆ ಅಡ್ಡಬಂದಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಇಳಿದಿದೆ.
ಘಟನೆಯಲ್ಲಿ ಯಾರಿಗೂ ಯಾವ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.ಶಾಸಕರು ಹಾಗೂ ಆಪ್ತ ಸಹಾಯಕ, ಚಾಲಕ ಸೇರಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.