ಚಿಕ್ಕಮಗಳೂರು: ತುಂಗೆಯಲ್ಲಿ ಸ್ನಾನಕ್ಕಾಗಿ ಹೋದ ಒಂದೇ ಕುಟುಂಬದ ನಾಲ್ವರು ನೀರುಪಾಲು!
ಚಿಕ್ಕಮಗಳೂರು: ತುಂಗೆಯಲ್ಲಿ ಸ್ನಾನಕ್ಕಾಗಿ ಹೋದ ಒಂದೇ ಕುಟುಂಬದ ನಾಲ್ವರು ನೀರುಪಾಲು!

ಚಿಕ್ಕಮಗಳೂರು: ತುಂಗೆಯಲ್ಲಿ ಸ್ನಾನಕ್ಕಾಗಿ ಹೋದ ಒಂದೇ ಕುಟುಂಬದ ನಾಲ್ವರು ನೀರುಪಾಲು!

ತುಂಗಾ ನದಿಯಲ್ಲಿ ಸ್ನಾನಕ್ಕಾಗಿ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಸುಳಿಗೆ ಸಿಕ್ಕು ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲಿ ನಡೆದಿದೆ.
Published on
ಚಿಕ್ಕಮಗಳೂರು: ತುಂಗಾ ನದಿಯಲ್ಲಿ ಸ್ನಾನಕ್ಕಾಗಿ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಸುಳಿಗೆ ಸಿಕ್ಕು ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ನಡೆದಿದೆ.
ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಸಮೀಪದ ತುಂಗಾ ನದಿಯಲ್ಲಿ ಸ್ನಾನಕ್ಕಾಗಿ ತೆರಳಿದ್ದ ಒಂದೇ ಕುಟುಂಬದ ರಾಮಚಂದ್ರ, ರತ್ನಾಕರ, ನಾಗೇಂದ್ರ, ಪ್ರದೀಪ್ ಎನ್ನುವವರು ಸಾವನ್ನಪ್ಪಿದ ದುರ್ದೈವಿಗಳು.
ರಾಮಚಂದ್ರ ಅವರ ಮನೆಯ ಕಾರ್ಯಕ್ರಮಕ್ಕಾಗಿ ಉಳಿದ ಮೂವರು ಸಂಬಂಧಿಕರು ಆಗಮಿಸಿದ್ದರು. ಆವೇಳೆ ಪ್ರದೀಪ್ ನದಿ ಸ್ನಾನ,.ಈಜಲು ತೆರಳಿದ್ದಾನೆ. ಆಗ ಸುಳಿಗೆ ಸಿಕ್ಕು ಒದ್ದಾಡುತ್ತಿದ್ದದ್ದನ್ನು ಕಂಡ ರಾಮಚಂದ್ರ, ರತ್ನಾಕರ, ನಾಗೇಂದ್ರ ಎನ್ನುವವರು ಪ್ರದೀಪ್ ಅವರನ್ನು ಉಳಿಸಲು ಮುಂದಾದಾಗ ತಾವೂ ಸುಳಿಗೆ ಸಿಕ್ಕು ನೀರುಪಾಲಾಗಿದ್ದಾರೆ.
ರತ್ನಾಕರ್ ಕೊಪ್ಪ ತಾಲೂಕಿನ ಬಾಳೆಹಕ್ಲು ಗ್ರಾಮದವರೆನ್ನಲಾಗಿದ್ದು ಉಳಿದಿಬ್ಬರ ಮಾಹಿತಿ ತಿಳಿದಿಲ್ಲ.
ಘಟನಾ ಸ್ಥಳಕ್ಕೆ ಶೃಂಗೇರಿ ಪೋಲೀಸರು, ನುರಿತ ಈಜುಗಾರರು ಆಗಮಿಸಿ ಶವಗಳ ಶೋಧಕಾರ್ಯ ನಡೆಸಿದ್ದಾರೆ, ಇದುವರೆಗೆ ಓರ್ವನ ಶವ ಮಾತ್ರ ಪತ್ತೆಯಾಗಿದ್ದು ಉಳಿದ ಮೂವರ ಶವಕ್ಕಾಗಿ ಹುಡುಕಾಟ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com