ಮೃತ ಮಕ್ಕಳ ತಾಯಿ ನಾಗಮಣಿ ಹಾಗೂ ತಂದೆ ಮಹೇಶ್ ಸೇರಿ ಕುಟುಂಬದ ಎಲ್ಲರೂ ಮದ್ಯವ್ಯಸನಿಗಳಾಗಿದ್ದರು ಎಂದು ಹೇಳಲಾಗಿದೆ. ಕೆಲಸದ ಸಮಯದಲ್ಲಿ ಮಕ್ಕಳನ್ನು ಅಜ್ಜಿ ಸಮೀಪ ಬಿಟ್ಟು ಹೋಗಲಾಗುತ್ತಿತ್ತು. ಎಲ್ಲರೂ ಮದ್ಯಪಾನ ಮಾಡುತ್ತಿದ್ದು ಅದರ ನಶೆಯಲ್ಲೇ ಇರುತ್ತಿದ್ದ ಕಾರಣ ಮಕ್ಕಳಿಗೆ ಸರಿಯಾಗಿ ಊಟ ಹಾಕುತ್ತಿರಲಿಲ್ಲ. ಹಾಗಾಗಿ ಮನೆಯಲ್ಲಿ ಊಟ ವಿಲ್ಲದೆ, ತಿನ್ನಲು ಏನೂ ಸಿಕ್ಕದ ಮಕ್ಕಳು ಮಣ್ಣನ್ನು ತಿಂದು ಸಾವಿಗೀಡಾಗಿವೆ.