ಗದಗ: ಆಕರ್ಷಕ ಬಹುಮಾನದ ಆಮಿಷವೊಡ್ಡಿ ಲಾಟರಿ ಕಂಪೆನಿಯಿಂದ 4 ಸಾವಿರ ಮಂದಿಗೆ ಪಂಗನಾಮ!

ಜಿಲ್ಲೆಯ ನರಗುಂದ ತಾಲ್ಲೂಕಿನ ಲಾಟರಿ ಕಂಪೆನಿಯಿಂದ ಮೋಸಕ್ಕೊಳಗಾದ ಗ್ರಾಹಕರು ಲಾಟರಿ ಕಂಪೆನಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಗದಗ: ಜಿಲ್ಲೆಯ ನರಗುಂದ ತಾಲ್ಲೂಕಿನ ಲಾಟರಿ ಕಂಪೆನಿಯಿಂದ ಮೋಸಕ್ಕೊಳಗಾದ ಗ್ರಾಹಕರು ಲಾಟರಿ ಕಂಪೆನಿ ಮಾಲೀಕನ ಮನೆಯೊಳಗೆ ನುಗ್ಗಿ ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಲಾಟರಿ ಖರೀದಿಸಿದ್ದ ಕೆಲವು ಮಹಿಳೆಯರು ಮಾಲೀಕರ ಮನೆಯೊಳಗೆ ನುಗ್ಗಿ ಕುರ್ಚಿ ಮತ್ತು ಟೇಬಲ್ ಗಳನ್ನು ಹೊತ್ತುಕೊಂಡು ಹೋದ ಪ್ರಸಂಗ ಕೂಡ ನಡೆಯಿತು.
ನರಗುಂದ ತಾಲ್ಲೂಕಿನ ಸುಮಾರು 4 ಸಾವಿರ ಮಂದಿ ಹಲವರು 250 ರೂಪಾಯಿ ಕಟ್ಟಿ ಲಾಟರಿ ಖರೀದಿಸಿ ಕಂಪೆನಿಯಿಂದ ಬಹುಮಾನ ಘೋಷಿಸುವುದಕ್ಕೆ ಕಾಯುತ್ತಿದ್ದರು.
ಫಲಿತಾಂಶ ಘೋಷಿಸಿದಾಗ ಹಣ ಕೊಟ್ಟು ಟಿಕೆಟ್ ಖರೀದಿಸಿದವರ ಯಾರ ಹೆಸರು ಕೂಡ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಜನರು ಕಾಡಪ್ಪ ಕಕನೂರು ಮತ್ತು ನರಗುಂದ ಪಟ್ಟಣದ ಹುಣಸಿಕಟ್ಟಿ ಗ್ರಾಮದ ಚಿಕ್ಕೊಪ್ಪದ ಎಸ್ ಕೆಯವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com