ಅಕ್ಷಯ ತೃತೀಯ ದಿನ ಚಿನ್ನದ ಮಳಿಗೆಗಳಿಗೆ ಭೇಟಿ ನೀಡುವ ಗ್ರಾಹಕರ ಜೊತೆ ಜಾಗ್ರತೆಯಿಂದ ವರ್ತಿಸಿ, ಹಾಗೆಯೇ ಗ್ರಾಹಕರು ಕೂಡ ತಮ್ಮ ಚಿನ್ನ, ಬೆಳ್ಳಿ, ಹಣ ಮತ್ತು ಅಮೂಲ್ಯ ವಸ್ತುಗಳನ್ನು ಜಾಗ್ರತೆಯಾಗಿ ನೋಡಿಕೊಳ್ಳಿ. ಗ್ರಾಹಕರ ಸೋಗಿನಲ್ಲಿ ಬಂದು ಖದೀಮರು ಚಿನ್ನ ಮತ್ತು ಹಣ ಎಗರಿಸುವ ಸಾಧ್ಯತೆಯಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.