ಅವರು ನಿನ್ನೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ,ಇವೆಲ್ಲ ಗ್ರಾಹಕರನ್ನು ಸೆಳೆಯಲು ಚಿನ್ನದ ಅಂಗಡಿಯವರು ಮಾಡುವ ನಾಟಕವಷ್ಟೆ, ಇವಕ್ಕೆಲ್ಲಾ ಕಾರಣ ಜನರ ಮೂಢನಂಬಿಕೆ, ಜನ ಏನು ಹೇಳಿದರೂ ನಂಬಿ ಬಿಡುತ್ತಾರೆ. ನಗರ ಪ್ರದೇಶಗಳಲ್ಲಿ ಬಹುತೇಕ ಮಂದಿ ತಿಂಗಳ ವರಮಾನ ನಂಬಿಕೊಂಡು ಬದುಕುವವರು. ಅಕ್ಷಯ ತೃತೀಯ ಹೆಸರಿನಲ್ಲಿ ಇಂತವರನ್ನು ಬ್ರೈನ್ ವಾಶ್ ಮಾಡಿ ಚಿನ್ನ ಖರೀದಿಸಿದರೆ ನಿಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದೆಲ್ಲ ಹೇಳಿ ಮರುಳುಗೊಳಿಸುತ್ತಾರೆ. ವಾಸ್ತವವಾಗಿ ಈ ಮೂಢನಂಬಿಕೆಯಿಂದ ಚಿನ್ನ ಖರೀದಿಸಲು ಸಾಲ ಮಾಡಲು ಹೋಗಿ ಕಷ್ಟಕ್ಕೆ ಒಳಗಾಗುತ್ತಾರೆ ಎಂದು ಸೋಮಶೇಖರ್ ವಾದಿಸುತ್ತಾರೆ.