ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಸಂಗ: ಚಿಕಿತ್ಸೆ ಫಲಿಸದೆ ಬೀದಿನಾಯಿ ಸತ್ತದ್ದಕ್ಕೆ ವೈದ್ಯರ ವಿರುದ್ಧ ದೂರು ದಾಖಲು!

ನಾಯಿಯ ಸಂತಾನ ಹರಣ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷದಿಂದ ಬೀದಿ ನಾಯಿಯೊಂದು ಸತ್ತಿದ್ದಕ್ಕಾಗಿ ಎನ್​​ಜಿಒ ಮತ್ತು ವೈದ್ಯರ ವಿರುದ್ಧ ಎಫ್​​ಐಆರ್​​​​​​​​​​​​ ದಾಖಲಿಸಿರುವ ಘಟನೆ ಬೆಂಗಳುರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ವಿಚಿತ್ರ ಪ್ರಸಂಗವೊಂದರಲ್ಲಿ ನಾಯಿಯ ಸಂತಾನ ಹರಣ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷದಿಂದ ಬೀದಿ ನಾಯಿಯೊಂದು ಸತ್ತಿದ್ದಕ್ಕಾಗಿ ಎನ್​​ಜಿಒ ಮತ್ತು ವೈದ್ಯರ ವಿರುದ್ಧ ಎಫ್​​ಐಆರ್​​​​​​​​​​​​ ದಾಖಲಿಸಿರುವ ಘಟನೆ ಬೆಂಗಳುರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ವೈದ್ಯರ ತಪ್ಪಿನಿಂಡಾಗಿ ಬೀದಿನಾಯಿ ಸಾವನ್ನಪ್ಪಿದೆ, ಜೂಲಿ  ಹೆಸರಿನ ಈ ನಾಯಿ ನಮಗೆಲ್ಲಾ ಅಚ್ಚುಮೆಚ್ಚಿನದಾಗಿತ್ತು. ಇದೀಗ ನಾಯಿಯ ಸಾವಿಗೆ ಕಾರಣವಾದ ಎನ್​​ಜಿಒ ಮತ್ತು ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಬೈಯಪ್ಪನಹಳ್ಳಿ ಪೋಲೀಸರಿಗೆ ದೂರಿತ್ತಿದ್ದಾರೆ.
ಘಟನೆ ವಿವರ
ಸುಷ್ಮಾ ಎಂಟರ್ ಪ್ರೈಸಸ್ ಹೆಸರಿನ ಎನ್​​ಜಿಒ ಸದಸ್ಯರು ಜೂಲಿಯನ್ನು ಕೆಲದಿನಗಳ ಹಿಂದೆ ಸಂತಾನಹರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಮುಗಿದ ಬಳಿಕ ಅವರು ನಾಯಿಯನ್ನು ಬೀದಿಯಲ್ಲೇ ಬಿಟ್ಟು ಹೋಗಿದ್ದಾರೆ. ಏಳು ತಿಂಗಳ ನಾಯಿ ಜೂಲಿ ಶಸ್ತ್ರಚಿಕಿತ್ಸೆ ಪಡೆದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದೆ.
ಈ ಕುರಿತಂತೆ ಸ್ಥಳೀಯ ನಿವಾಸಿಯಾದ ನವೀನ್ ಕಾಮತ್ ಎನ್​​ಜಿಒ ಸಂಸ್ಥೆಯ ಮುಖ್ಯಸ್ಥ ಅರುಣಾ ರೆಡ್ಡಿ ಹಾಗೂ ಶಸ್ತ್ರಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ದೂರುದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com