ಬೆಳಗಾವಿ: ಖಾನಾಪುರ ಅರಣ್ಯದಲ್ಲಿ ಎರಡು ಮರಿ ಕರಡಿಗಳು ಸೇರಿದಂತೆ ಮೂರು ಕರಡಿಗಳ ದಾಳಿಯಿಂದ 14 ವರ್ಷದ ಬಾಲಕನನ್ನು 13 ವರ್ಷದ ಸಾಹಸಿ ಬಾಲಕನೋರ್ವ ಪ್ರಾಣಪಾಯದಿಂದ ಪಾರು ಮಾಡಿರುವ ಘಟನೆ ನಡೆದಿದೆ.
ಮರದ ತುಂಡಿನಿಂದ ಕರಡಿಗಳ ಬಾಯಿಗೆ ತುತ್ತಾಗಬೇಕಿದ್ದ ಸೋದರ ಸಂಬಂಧಿಯನ್ನು ರಕ್ಷಿಸಿದ ಸಚಿನ್ ರಾತ್ರೋ ರಾತ್ರಿ ಖಾನ್ ಪುರ ತಾಲೂಕಿನಲ್ಲಿ ಪ್ರಸಿದ್ಧಿಯಾಗಿದ್ದಾನೆ. ಪ್ರಾಣ ಪಣಕ್ಕಿಟ್ಟು ಹೋರಾಡಿ ತನ್ನ ಸಂಬಂಧಿಯನ್ನು ರಕ್ಷಿಸಿದ ಈ ಹುಡುಗನಿಗೆ ಅನೇಕ ನಾಯಕರು ಸನ್ಮಾನ ಮಾಡುತ್ತಿದ್ದಾರೆ.
ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಗಣೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕರಡಿ ದಾಳಿಯಿಂದಾಗಿ ಆತನ ಎರಡು ಕೈಗಳು ಹಾಗೂ ತಲೆಗೆ ಗಾಯಗಳಾಗಿರುವುದಾಗಿ ಸಚಿನ್ ಪೋಷಕರು ಹೇಳಿದ್ದಾರೆ.
Advertisement