ಯುವಕ ಅಜಯ್ ಗೆ ಇದರಿಂದ ಇನ್ನಷ್ಟು ಆಘಾತವಾಗಿದೆ. ಯುವತಿ ಮೇಲೆ ಸೇಡು ತೀರಿಸಿಕೊಳ್ಲಲು ತೀರ್ಮಾನಿಸಿದ್ದಾನೆ. ಮೇ. 12ರಂದು ಗಗನಸಖಿ ಕ್ಯಾಬ್ನಲ್ಲಿ ಬರುವ ವೇಳೆ ಕ್ಯಾಬ್ ಅಡ್ಡಗಟ್ಟಿದ ಅಜಯ್ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೆ "ನಿನ್ನಿಂದ ನಾನು ರೌಡಿಯಾಗಬೇಕಾಯಿತು" ಎಂದು ಗಗನಸಖಿ ಮೇಲೆ ಸಹ ಹಲ್ಲೆ ಮಾಡಿದ್ದಾನೆ. ಅಲ್ಲದೆ ಮತ್ತೆ ಆಕೆ ತನ್ನನ್ನು ಮದುವೆಯಾಗಬೇಕು ಎಂದು ಒತ್ತಾಯಿಸಿದ್ದಾನೆ. ಆ ವೇಳೆ ಯುವತಿ ಅದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಅಜಯ್ ಆಕೆಯ ಕಿವಿ ಕತ್ತರಿಸಿದ್ದ.