ನಿಪ್ಪಾಣಿ: ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಶಿಕ್ಷಕನ ಹಿಡಿದು ಗಳಗಳನೆ ಅತ್ತ ವಿದ್ಯಾರ್ಥಿಗಳು!

ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಬಾಂಧವ್ಯ ಎಷ್ಟರ ಮಟ್ಟಿಗೆ ಇದೆ ಅಂದರೆ ಶಿಕ್ಷಕ ವರ್ಗಾವಣೆ ಆದ ನಂತರ ವಿದ್ಯಾರ್ಥಿಗಳು ಗಳಗಳನೇ ಅತ್ತ ಘಟನೆ‌‌ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣದಲ್ಲಿ ನಡೆದಿದೆ.
ಶಿಕ್ಷಕ-ವಿದ್ಯಾರ್ಥಿಗಳು
ಶಿಕ್ಷಕ-ವಿದ್ಯಾರ್ಥಿಗಳು
Updated on

ಬೋರಗಾಂವ: ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಬಾಂಧವ್ಯ ಎಷ್ಟರ ಮಟ್ಟಿಗೆ ಇದೆ ಅಂದರೆ ಶಿಕ್ಷಕ ವರ್ಗಾವಣೆ ಆದ ನಂತರ ವಿದ್ಯಾರ್ಥಿಗಳು ಗಳಗಳನೇ ಅತ್ತ ಘಟನೆ‌‌ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣದಲ್ಲಿ ನಡೆದಿದೆ.
 
ಬೋರಗಾಂವ ಪಟ್ಟಣದ ಸರಕಾರಿ ಮರಾಠಿ ಶಾಲೆಯ ಶಿಕ್ಷಕ ರಮೇಶ ಮಠಪತಿ ಅವರು ದೈಹಿಕ ಶಿಕ್ಷಕನಾಗಿ ಕಳೆದ ಐದು ವರ್ಷಗಳಿಂದ ಇದೇ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 

ಆದರೆ ಶಿಕ್ಷಕ ಮಠಪತಿ ಅವರನ್ನು ವಿಜಪುರದ ಮುದ್ದೇಬಿಹಾಳಕ್ಕೆ ವರ್ಗಾವಣೆ ಮಾಡಿದ ಹಿನ್ನೆಲೆಯ ವಿದ್ಯಾರ್ಥಿಗಳು ಶಿಕ್ಷಕರನ್ನು ನೆನೆದು ಗಳಗಳನೇ ಅತ್ತಿದ್ದಾರೆ. ಇನ್ನೂ ಶಿಕ್ಷಕ ವರ್ಗಾವಣೆ ಆದ ಹಿನ್ನೆಲೆ ನಂತರ ಶಿಕ್ಷಕನ ಕಾಲಿಗೆ ಬಿದ್ದು ನಂತರ ಬೀಳ್ಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಕಣ್ಣೀರಿನಿಂದ ನೆರೆದಿದ್ದ ಶಿಕ್ಷಕರು ಕಣ್ಣೀರು ಹಾಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com