ಮಂಡ್ಯ:ಮಂಚಕ್ಕೆ ಬಾರದ ಸೊಸೆಯನ್ನು ಕೊಂದ ಮಾವ ಜೈಲಲ್ಲಿ ಆತ್ಮಹತ್ಯೆ!

ಕಾಮದಾಸೆ ತೀರಿಸಿಕೊಳ್ಳಲು ಮಂಚಕ್ಕೆ ಕರೆದಾಗ ಬಾರದ ಸೊಸೆಯನ್ನು ಅಮಾನುಶವಾಗಿ ಕೊಂದಿದ್ದ ಮಾವನೊಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ನಡೆದ ಘಟನೆಯಲ್ಲಿ ನಾಗರಾಜು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಂಡ್ಯ: ಮಂಚಕ್ಕೆ ಬಾರದ ಸೊಸೆಯನ್ನು ಕೊಂದ ಮಾವ ಜೈಲಲ್ಲಿ ಆತ್ಮಹತ್ಯೆ!
ಮಂಡ್ಯ: ಮಂಚಕ್ಕೆ ಬಾರದ ಸೊಸೆಯನ್ನು ಕೊಂದ ಮಾವ ಜೈಲಲ್ಲಿ ಆತ್ಮಹತ್ಯೆ!
Updated on

ಮಂಡ್ಯ: ಕಾಮದಾಸೆ ತೀರಿಸಿಕೊಳ್ಳಲು ಮಂಚಕ್ಕೆ ಕರೆದಾಗ ಬಾರದ ಸೊಸೆಯನ್ನು ಅಮಾನುಶವಾಗಿ ಕೊಂದಿದ್ದ ಮಾವನೊಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ನಡೆದ ಘಟನೆಯಲ್ಲಿ ನಾಗರಾಜು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಾಗರಾಜು ತನ್ನ ಮಗ ಅನಿಲ್ ಪತ್ನಿ ವೀಣಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ. ತನ್ನೊಡನೆ ಮಂಚಕ್ಕೆ ಬರದ ಕಾರಣ ಅಸಮಾಧಾನ ಹೊಂದಿದ್ದ ನಾಗರಾಜು ನವೆಂಬರ್ 9ರಂದು ಸೊಸೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಈ ಸಂಬಂಧ ವೀನಾ ಪತಿ, ಆರೋಪಿ ಪುತ್ರನಾದ ಅನಿಲ್  ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ದೂರಿನ ಹಿನ್ನೆಲೆ ಆರೋಪಿ ನಾಗರಾಜುವನ್ನು ಬಂಧಿಸಿದ್ದ ಪೋಲೀಸರು ವಿಚಾರಣೆ ನಡೆಸಿದ್ದು ಕೋರ್ಟ್ ಅವನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆದರೆ ವಿಚಾರಣಾಧೀನ ಖೈದಿಯಾಗಿದ್ದ ನಾಗರಾಜು ಮಂಗಳವಾರ ಮುಂಜಾನೆ ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಅದನ್ನು ಗಮನಿಸಿದ ಪೋಲೀಅರು ಆತನನ್ನು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಮೃತಪಟ್ಟಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com