ಬೆಂಗಳೂರು: ಬೆಂಗಳೂರು ಗೊರಗುಂಟೆಪಾಳ್ಯ ಮೇಲ್ಸೇತುವೆಗೆ ತುಮಕೂರು ಸಿದ್ದಗಂಗಾ ಮಠದ ಶಿವೈಕ್ಯ ಶ್ರೀ ಶಿವಕುಮಾರಸ್ವಾಮಿಗಳ ಹೆಸರು ನಾಮಕರಣ ಮಾಡಲಾಗಿದ್ದು ಶುಕ್ರವಾರ ನಾಮಫಲಕ ಉದ್ಘಾಟಿಸಲಾಗಿದೆ.
ಮೇಲುಸೇತುವೆ ಬಳಿ ನಡೆದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠ್ದ ಸ್ವಾಮೀಜಿಗಳಾದ ಶ್ರೀ ಸಿದ್ಧಮಹಾಲಿಂಗ ಸ್ವಾಮೀಜಿ ತಾವು ಮೇಲ್ಸೇತುವೆಗೆ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಿದ್ದಾರೆ.
ಈ ವೇಳೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಆಯುಕ್ತರಾದ ಅನಿಲ್ ಕುಮಾರ್ ಸಹ ಉಪಸ್ಥಿತರಿದ್ದರು.
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಮೇಲ್ಸೇತುವೆಗೆ ಶಿವಕುಮಾರ ಶ್ರೀಗಳ ಹೆಸರಿಡುವುದಾಗಿ ಈ ಹಿಂದೆ ಬಜೆಟ್ ನಲ್ಲಿಲ್ಯೇ ಘೋಷಿಸಲಾಗಿತ್ತು. ಅದರಂತೆ ಇಂದು ಈ ಕಾರ್ಯಕ್ರಮ ನೆರವೇರಿದೆ.
Advertisement