ಕಾಪು: ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕನೊಬ್ಬ ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಕಾಪುವಿನ ಸಮೀಪ ಉಚ್ಚಿಲದಲ್ಲಿ ನಡೆದಿದೆ. ಉಚ್ಚಿಲದ ರಾಷ್ಟ್ರೀಯ ಹ್ಯೆದ್ದಾರಿ-66ರಲ್ಲಿ ಸಂಭವಿಸಿದ ಅಪಘಾತದಲ್ಲಿ ಲಾರಿ ಮತ್ತೊಂದು ಲಾರಿಗೆಢಿಕ್ಕಿಯಾಗಿದೆ.
ಉಡುಪಿ-ಮಂಗಳುರು ರಸ್ತೆಯಲ್ಲಿ ಮೈದಾಹಿಟ್ಟು ಸಾಗಿಸುತ್ತಿದ್ದ ಲಾರಿ ಕೆಟ್ಟು ನಿಂತಿದ್ದು ಇದಕ್ಕೆ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಹಿಂದಿನಿಂದ ಬಂದು ಢಿಕ್ಕಿಯಾಗಿದೆ. ಈ ವೇಳೆ ಲಾರಿ ರಿಪೇರಿ ಮಾಡುತ್ತಿದ್ದ ಹುಬ್ಬಳ್ಳಿ ಮೂಲದ ಚಾಲಕ ಮಹಂತೇಶ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಇನ್ನೊಂದು ಲಾರಿ ಚಾಲಕ ಸಹ ಗಾಯಗೊಂಡಿದ್ದಾಗಿ ಪೋಲೀಸ್ ಮೂಲಗಳು ಹೇಳಿದೆ.
ಅಪಘಾತದ ತೀವ್ರತೆಗೆ ಕೆಟ್ಟು ನಿಂತ ಲಾರಿ ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಬದಿಗೆ ಉರುಳಿದೆ. ಢಿಕ್ಕಿ ಹೊಡೆದಲಾರಿ ಸಹ ಪಲ್ಟಿಯಾಗಿದೆ. ಮಂಗಳವಾರ ಮುಂಜಾನೆ 4 ಗಂಟೆಗೆ ಈ ಅವಘಡ ಸಂಭವಿಸಿದ್ದು ಘಟನೆ ಕುರಿತಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement