ಬೆಂಗಳೂರು: ಮಹಿಳೆಯ ಬರ್ಬರ ಕೊಲೆ; ಆರೋಪಿಗಳ ಪತ್ತೆಗೆ ಶೋಧ

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿದ್ದು, ಪೊಲೀಸರಿಗೆ ಆರೋಪಿಗಳ ಗುರುತು ಪತ್ತೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿದ್ದು, ಪೊಲೀಸರಿಗೆ ಆರೋಪಿಗಳ ಗುರುತು ಪತ್ತೆಯಾಗಿದೆ.

ವಿನಾಯಕ ಲೇಔಟ್ ನಿವಾಸಿ ಶಾಂತಮ್ಮ (40) ಕೊಲೆಯಾದವರು. ಅವರನ್ನು ಕಳೆದ ಏ.21 ರ ರಾತ್ರಿ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿದೆ. ಆರೋಪಿಗಳ ಪತ್ತೆಗಾಗಿ ಚಂದ್ರಾಲೇಔಟ್‌ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. 

ಕಲ್ಯಾಣ ಮಂಟಪಗಳಲ್ಲಿ ಕೆಲಸ ಮಾಡಿಕೊಂಡಿದ್ದ ಶಾಂತಮ್ಮ ಅವರಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ತಾನು ವಾಸಿಸುತ್ತಿದ್ದ ಪ್ರದೇಶದ ನಿವಾಸಿ ವಡಿವೇಲು ಎಂಬಾತನ ಜೊತೆ ಶಾಂತಮ್ಮ ಅವರಿಗೆ ಹೆಚ್ಚಿನ ಸಲುಗೆ ಇತ್ತು ಎನ್ನಲಾಗಿದೆ.

ವಡಿವೇಲು ಮನೆಯಲ್ಲಿ ಶಾಂತಮ್ಮ ಮಂಗಳವಾರ ರಾತ್ರಿ ಇದ್ದಾಗ ಅಲ್ಲಿಗೆ ಪತಿ ಧನು ಬಂದಿದ್ದರು. ಮೂವರ ನಡುವೆ ಮಾತಿನ ವಾಗ್ವಾದ ನಡೆದಿತ್ತು ಈ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com