ಬಾವಲಿಯಿಂದ ಕೊರೋನಾ ವೈರಸ್ ಬರುವುದಿಲ್ಲ, ಮರಗಳನ್ನು ಕಡಿಯಬೇಡಿ: ಅರಣ್ಯ ಇಲಾಖೆ ಅಧಿಕಾರಿಗಳು

ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ವೈರಸ್ ಯಾವುದರಿಂದ ಮೊದಲ ಬಾರಿಗೆ ಹಬ್ಬಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಬಾವಲಿಗಳಿಂದ, ಹಕ್ಕಿಗಳಿಂದ ಬಂದಿವೆ ಎಂಬ ಮಾತುಗಳು ಕೇಳಿಬರುತ್ತಿವೆ, ಆದರೆ ಇದು ಖಚಿತವಾಗಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ವೈರಸ್ ಯಾವುದರಿಂದ ಮೊದಲ ಬಾರಿಗೆ ಹಬ್ಬಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಬಾವಲಿಗಳಿಂದ, ಹಕ್ಕಿಗಳಿಂದ ಬಂದಿವೆ ಎಂಬ ಮಾತುಗಳು ಕೇಳಿಬರುತ್ತಿವೆ, ಆದರೆ ಇದು ಖಚಿತವಾಗಿಲ್ಲ.

ಕೊರೋನಾ ಬಾವಲಿಯಿಂದ ಮೊದಲ ಸಲ ಹಬ್ಬಿತು ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿರುವುದರಿಂದ ಬಾವಲಿಗಳು ನೆಲೆಸಿರುವ ಮರಗಳನ್ನು ಬುಡಸಮೇತ ಕಡಿದುಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಾವಲಿಗಳು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಮರಗಳನ್ನು ಕಡಿಯುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಜನರಿಗೆ ಮರಗಳನ್ನು ಕಡಿಯದಂತೆ ಎಚ್ಚರಿಕೆ ನೀಡಲು ಆರಂಭಿಸಿದ್ದಾರೆ.

ಮೈಸೂರು, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರಗಳಲ್ಲಿ ಬಾವಲಿಗಳು ಮರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಇಲಾಖೆ ಈ ಭಾಗಗಳಲ್ಲಿ ಜನರಿಗೆ ಎಚ್ಚರಿಕೆ ನೀಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಇತ್ತೀಚಿನ ವರದಿ ಪ್ರಕಾರ, ದಕ್ಷಿಣ ಏಷ್ಯಾದ ಎರಡು ಪ್ರಭೇದದ ಬಾವಲಿಗಳಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ, ಕೊರೋನಾ ವೈರಸ್ ಹರಡುವುದಿಲ್ಲ ಎಂದು ಹೇಳಿದೆ.

ಅಧ್ಯಯನದಲ್ಲಿ ಕಂಡುಬಂದಿರುವ ಸೋಂಕು ಸಾರ್ಸ್-ಕೊವಿ-2ಗಿಂತ ಭಿನ್ನವಾಗಿದ್ದು ಇದರಿಂದ ಕೊರೋನಾ ಸೋಂಕು ಬರುವುದಿಲ್ಲ ಎಂದು ತಿಳಿದುಬಂದಿದೆ.

ಕೊರೋನಾ ಭೀತಿಯಿಂದ ಮರಗಳನ್ನು ಕಡಿಯುವುದರಿಂದ ಅವುಗಳ ಉಳಿವಿನ ಬಗ್ಗೆ ಆತಂಕ, ಕಳವಳ ವ್ಯಕ್ತಪಡಿಸಿದ ದಕ್ಷಿಣ ಏಷ್ಯಾದ ವಿಜ್ಞಾನಿಗಳು ಮತ್ತು ಸಂರಕ್ಷಣಾ ತಜ್ಞರು ಸರ್ಕಾರಗಳು ಮತ್ತು ಆರೋಗ್ಯ ಅಧಿಕಾರಿಗಳಿಗೆ ಅವುಗಳ ಸಂರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಪರಿಸರ ವ್ಯವಸ್ಥೆಯಲ್ಲಿ ಬಾವಲಿಗಳು ಪ್ರಮುಖ ಪಾತ್ರವಹಿಸುವುದರಿಂದ ಅವುಗಳನ್ನು ರಕ್ಷಿಸುವುದು ಅಗತ್ಯ ಎಂದು ಹೇಳಿದ್ದಾರೆ.

ಬಾವಲಿಗಳ ಮಲವಿಸರ್ಜನೆಯಿಂದ ಮಾನವರಿಗೆ ಕರೋನವೈರಸ್ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಾವಲಿಗಳು ಬೆಳೆಯುವ ಮರಗಳನ್ನು ಕಡಿಯಬೇಕೆಂದು ಜನರು ಒತ್ತಾಯಿಸುತ್ತಾರೆ.ಆದರೆ ಇದರಿಂದ ಬಾವಲಿಗಳ ವಾಸಕ್ಕೆ ತೊಂದರೆಯಾಗುತ್ತದೆ, ಹಾಗಾಗಿ ಯಾರೂ ಸಹ ಮರಗಳನ್ನು ಕಡಿದು ಪರಿಸರ ವ್ಯವಸ್ಥೆಗೆ ಹಾನಿಮಾಡಬೇಡಿ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com