ಮಂಡ್ಯ: ದೇವರ ಗರ್ಭಗುಡಿಯಲ್ಲೇ ಪೂಜಾರಿ ಸಾವು

ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಗರ್ಭಗುಡಿಯಲ್ಲೇ ಪೂಜಾರಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಜರುಗಿದೆ.
ದೇವರ ಗರ್ಭಗುಡಿಯಲ್ಲೇ ಪೂಜಾರಿ ಸಾವು
ದೇವರ ಗರ್ಭಗುಡಿಯಲ್ಲೇ ಪೂಜಾರಿ ಸಾವು
Updated on

ಮಂಡ್ಯ: ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಗರ್ಭಗುಡಿಯಲ್ಲೇ ಪೂಜಾರಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಜರುಗಿದೆ.

ಮಲ್ಲೇಶ್ವರಸ್ವಾಮಿ ದೇವಸ್ಥಾನದ ಪೂಜಾರಿ ಚಂದ್ರಶೇಖರ್(45) ಮೃತಪಟ್ಟವರಾಗಿದ್ದಾರೆ.

ಮೂಲಯಃ ಸಂತೇ ಕಸಲಗೆರೆಯ ನಿವಾಸಿಯಾದ ಚಂದ್ರಶೇಖರ್ ಹಲವು ವರ್ಷಗಳಿಂದ ಮಂಗಲ ಗ್ರಾಮದಲ್ಲಿನ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದು ದೇವರ ಸೇವಾಕಾಯಕ ಮಾಡುತ್ತಿದ್ದರು, ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಮಧ್ಯಾಹ್ನ ದೇವಾಯದಲ್ಲಿ ಮಲ್ಲೇಶ್ವರಸ್ವಾಮಿಗೆ ಪೂಜೆ ಮಾಡುತ್ತಿದ್ದರು, ಈ ವೇಳೆ, ಗರ್ಭಗುಡಿಯಲ್ಲೇ ಎದೆ ನೋವು ಕಾಣಿಸಿಕೊಂಡು ಬಿದ್ದಿದ್ದಾರೆ. ಇದನ್ನು ಕಂಡ ಸ್ಥಳಿಯ ಭಕ್ತರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.

ಮೃತ ಚಂದ್ರು ಅವರಿಗೆ ಪತ್ನಿ ಹಾಗೂ ಐವರು ಸೋದರಿಯರು ಇದ್ದಾರೆ. ಸುಮಾರು 12 ವರ್ಷದ ಹಿಂದೆ ಮದುವೆಯಾಗಿದ್ದ ಚಂದ್ರಶೇಖರ್‌ಗೆ ಮಕ್ಕಳಾಗಿರಲಿಲ್ಲ. ಇದೇ ಕೊರಗಿನಲ್ಲಿದ್ದ ದಂಪತಿಯು ಮಗುವೊಂದನ್ನು ದತ್ತು ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದರು. ಆದರೆ, ಆ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಚಂದ್ರು ಸಾವನ್ನಪ್ಪಿದ್ದಾರೆ.

ವರದಿ ನಾಗಯ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com