ಕೊಡಗು-ಕೇರಳ ಗಡಿ ವಾಹನ ಸಂಚಾರಕ್ಕೆ ಮುಕ್ತ

ಕೋವಿಡ್-19 ಹಿನ್ನೆಲೆಯಲ್ಲಿ ಸುಮಾರು 5 ತಿಂಗಳಿನಿಂದ ಬಂದ್ ಆಗಿದ್ದ ಕೊಡಗು-ಕೇರಳ ಗಡಿ ಭಾಗ ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ಮಾಕುಟ್ಟ-ಕೇರಳ ಗಡಿ ಭಾಗದಲ್ಲಿ ಸಂಚಾರಕ್ಕೆ ತೆರವು
ಮಾಕುಟ್ಟ-ಕೇರಳ ಗಡಿ ಭಾಗದಲ್ಲಿ ಸಂಚಾರಕ್ಕೆ ತೆರವು

ಮಡಿಕೇರಿ: ಕೋವಿಡ್-19 ಹಿನ್ನೆಲೆಯಲ್ಲಿ ಸುಮಾರು 5 ತಿಂಗಳಿನಿಂದ ಬಂದ್ ಆಗಿದ್ದ ಕೊಡಗು-ಕೇರಳ ಗಡಿ ಭಾಗ ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಆದರೆ ಅಂತರಾಜ್ಯ ಸಂಚಾರಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕವನ್ನು ತಡೆಗಟ್ಟಲು ಮಾಕುಟ್ಟ-ಕೇರಳ ಹೆದ್ದಾರಿ ಸೇರಿದಂತೆ ಎಲ್ಲಾ ಅಂತರಾಜ್ಯ ರಸ್ತೆಗಳನ್ನು ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೆ ಮುಚ್ಚಲಾಗಿತ್ತು.ಅವುಗಳೆಲ್ಲವನ್ನೂ ಈಗ ಸಂಚಾರಕ್ಕೆ ಮುಕ್ತ ಮಾಡಲಾಗಿದೆ.

ಗೂಡ್ಸ್ ವಾಹನಗಳು ಕೂಡ ಈ ರಸ್ತೆಯಲ್ಲಿ ಓಡಾಡಬಹುದು. ಆದರೆ ಟ್ಯಾಕ್ಸಿ ಸೇರಿದಂತೆ ಖಾಸಗಿ ವಾಹನಗಳ ಸಂಚಾರಕ್ಕೆ ಮಾತ್ರ ಆನ್ ಲೈನ್ ನಲ್ಲಿ ಸಂಬಂಧಪಟ್ಟ ಆಡಳಿತದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ವಿರಾಜಪೇಟೆ ತಹಶಿಲ್ದಾರ ನಂದೀಶ್ ತಿಳಿಸಿದ್ದಾರೆ.

ಈ ಮಧ್ಯೆ ಇದೇ ವಾರದಲ್ಲಿ ಬಸ್ ಸಂಚಾರಕ್ಕೆ ಕೂಡ ರಸ್ತೆ ತೆರವಾಗುವ ಸಾಧ್ಯತೆಯಿದೆ. ಕೊಡಗು ಜಿಲ್ಲಾಡಳಿತ ಮತ್ತು ಶಾಸಕ ಕೆ ಜಿ ಬೋಪಯ್ಯ ಅವರು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಆದೇಶ ನೀಡಿದ್ದು ಕರಿಕೆ-ಕೇರಳ ರಸ್ತೆ ಕಳೆದ ಭಾನುವಾರ ಸಂಚಾರಕ್ಕೆ ಮುಕ್ತವಾಗಿದೆ. ಭಾಗಮಂಡಲದಲ್ಲಿ ಕಳೆದ ವಾರ ಪ್ರವಾಹ ಬಂದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ಕೇರಳ ಸರ್ಕಾರ ಕರಿಕೆ-ಕೇರಳ ಗಡಿಭಾಗದಲ್ಲಿ ಬ್ಯಾರಿಕೇಡ್ ಹಾಕಿದ್ದು ತುರ್ತು ಸಂಚಾರಕ್ಕೆ ಮಾತ್ರ ಸದ್ಯ ಅನುಮತಿ ನೀಡಲಾಗಿದೆ ಎಂದು ಕರಿಕೆ ನಿವಾಸಿ ಮಧು ಹೇಳುತ್ತಾರೆ.

ಕೊಡಗಿನ ಮೂಲಕ ಹೋಗುವ ಎಲ್ಲಾ ಪ್ರಯಾಣಿಕರನ್ನು ಕೇರಳ ಆಡಳಿತಾಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ.ಆದರೆ ಕೊಡಗಿನಲ್ಲಿ ತಪಾಸಣೆಯಾಗುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com