ಇಬ್ಬರು ಪತ್ನಿಯರ ಜಗಳ ಬಗೆಹರಿಸಲಾಗದೆ ಪತಿ ಆತ್ನಹತ್ಯೆ!

ಎರಡು ಮದುವೆಯಾಗಿ ಇಬ್ಬರು ಹೆಂಡತಿಯರನ್ನು ಹೊಂದಿದ್ದ ವ್ಯಕ್ತಿಯೊಬ್ಬ, ಪತ್ನಿಯರ ಜಗಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಿಗಣಿ ಸಮೀಪದ ಕಲ್ಲುಬಾಳು ಎಂಬಲ್ಲಿ ನಡೆದಿದೆ.
ಇಬ್ಬರು ಪತ್ನಿಯರ ಜಗಳ ಬಗೆಹರಿಸಲಾಗದೆ ಪತಿ ಆತ್ನಹತ್ಯೆ!

ಬೆಂಗಳೂರು: ಎರಡು ಮದುವೆಯಾಗಿ ಇಬ್ಬರು ಹೆಂಡತಿಯರನ್ನು ಹೊಂದಿದ್ದ ವ್ಯಕ್ತಿಯೊಬ್ಬ, ಪತ್ನಿಯರ ಜಗಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಿಗಣಿ ಸಮೀಪದ ಕಲ್ಲುಬಾಳು ಎಂಬಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ನೀರಮಾನ್ವಿ ಗ್ರಾಮದ ವಾಸಿ ರಮೇಶ್( 40) ಆತ್ಮಹತ್ಯೆಗೆ ಶರಣಾದವರು.

ಈತ ಹಲವು ವರ್ಷಗಳ ಹಿಂದೆಯೇ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದು, ಇಬ್ಬರು ಪತ್ನಿಯರು ಮತ್ತು ಮಕ್ಕಳ ಜೊತೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಮಾರುತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. 

ಗಾರೆ ಕೆಲಸ ಮಾಡುತ್ತಿದ್ದ ಈತನಿಗೆ ಇಬ್ಬರು ಪತ್ನಿಯರ ಜಗಳ ಬಿಡಿಸಲಾಗದೆ ಕಗ್ಗಂಟಾಗಿತ್ತು. ಇದರಿಂದಾಗಿ ಇತ್ತೀಚೆಗೆ ಆಅ ಖಿನ್ನತೆಗೆ ಒಳಗಾಗಿದ್ದ. 

ಬುಧವಾರ ರಾತ್ರಿ ಕಲ್ಲುಬಾಳು ಸಮೀಪ ಸಂಬಂಧಿಗಳ ಮನೆಗೆ ಆಗಮಿಸಿದ್ದ ರಮೇಶ್ ಅಲ್ಲಿಂದ ಮನೆಗೆ ಹಿಂತಿರುಗುವುದಾಗಿ ಹೇಳಿ ಹೋದವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಗುರುವಾರ ಬೆಳಿಗ್ಗೆ ಈ ದೃಶ್ಯ ಕಂಡು ಪೋಲೀಸರಿಗೆ ಮಾಹಿತಿ ರವಾನಿಸಿದ್ದಾರೆ. 

ಸ್ಥಳಕ್ಕಾಗಮಿಸಿದ ಜಿಗಣಿ ಪೊಲೀಸರು ಸುತ್ತಮುತ್ತಲಿನವರಲ್ಲಿ ವಿಚಾರಿಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ, ತಕ್ಷಣ ಪೋಲೀಸರು ಮೃತನ ಇಬ್ಬರೂ ಪತ್ನಿಯರಿಗೆ ವಿಚಾರ ತಿಳಿಸಿದ್ದು ಅವರು ಸಾವನ್ನಪ್ಪಿದ ವ್ಯಕ್ತಿ ತಮ್ಮ ಪತಿ ಎಂದು ಗುರುತಿಸಿದ್ದಾರೆ. ಸಧ್ಯ ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ, 

ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com