ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಪೊಲೀಸರ ಗಣನೀಯ ಸೇವೆಯನ್ನು ಪರಿಗಣಿಸಿ ನೀಡುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕ ರಾಜ್ಯದ 19 ಪೊಲೀಸ್ಅಧಿಕಾರಿಗಳು, ಸಿಬ್ಬಂದಿ ಭಾಜನರಾಗಿದ್ದಾರೆ.
ರಾಷ್ಟ್ರ ಪದಕಕ್ಕೆ ಆಯ್ಕೆಯಾದವರನ್ನು ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆ ಶುಕ್ರವಾರ ಬಿಡುಗಡೆಗೊಳಿಸಿದೆ.
ಲೋಕಾಯುಕ್ತ ಸಂಸ್ಥೆ ಅಕ್ರಮ ಪ್ರಕರಣದ ತನಿಖೆ ನಡೆಸಿದ ಎಸ್ಐಟಿ ತಂಡದಲ್ಲಿ ಸೇವೆ ಸಲ್ಲಿಸಿದ ಸಿಐಡಿ ಸಹಾಯಕ ಸಬ್ಇನ್ಸ್ಪೆಕ್ಟರ್ ವಿ.ಎಲ್.ಎನ್. ಪ್ರಸನ್ನಕುಮಾರ್ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಲಭಿಸಿದೆ. ಶ್ಲಾಘನೀಯ ಸೇವಾ ಪದಕಕ್ಕೆ 18 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದು, ರಾಜ್ಯದ ಒಟ್ಟು 19 ಪೊಲೀಸರಿಗೆ ಈ ಬಾರಿ ಪ್ರಶಸ್ತಿ ದೊರಕಿದೆ.
ಪದಕ ವಿಜೇತ ಪೋಲೀಸ್ ಅಧಿಕಾರಿಗಳ ಪಟ್ಟಿ ಹೀಗಿದೆ-
ಕೆ. ಹೊನ್ನಪ್ಪ, ಸಿಹೆಚ್ಸಿ ಡಿಪಿಒ, ಬೆಂಗಳೂರು
ರಾಮಾಂಜನೇಯ, ಎಎಸ್ಐ ಕೆಬಿ ಕ್ರಾಸ್ ಠಾಣೆ ತುಮಕೂರು
ಹೆಚ್. ನಂಜುಂಡಯ್ಯ, ಎಎಸ್ಐ ಡಿಸಿಆರ್ಬಿ, ಚಿಕ್ಕಬಳ್ಳಾಪುರ ಜಿಲ್ಲೆ
ಎಂ. ಹೆಚ್ ಚಂಡೇಕರ್, SPL RSI 3rd BTN KSRP, ಬೆಂಗಳೂರು
ಜಿ. ಎನ್ ರುದ್ರೇಶ್ ,SPL RPI 3rd BTN ksrp, ಬೆಂಗಳೂರು
ಪಿ. ಉಮೇಶ್, ಡಿವೈಎಸ್ಪಿ ಪೊಲೀಸ್ ಟ್ರೈನಿಂಗ್ ಸ್ಕೂಲ್, ಮೈಸೂರು
ಹೆಚ್. ಎಂ ಸತೀಶ್, ಎಸಿಪಿ, ನಾರ್ತ್ ಟ್ರಾಫಿಕ್, ಬೆಂಗಳೂರು
ಹೆಚ್. ಎಂ. ಶೈಲೇಂದ್ರ, ಸೋಮವಾರಪೇಟೆ, ಸಬ್ ಡಿವಿಎಸ್, ಕೊಡಗು
ಪರಮೇಶ್ವರ್ ಹೆಗ್ಡೆ, , ಡಿವೈಎಸ್ಪಿ ಸಿಐಡಿ ಬೆಂಗಳೂರು
ವಿ.ಎಲ್.ಎನ್ ಪ್ರಸನ್ನ ಕುಮಾರ್, ಎಎಸ್ಐ ಸಿಐಡಿ, ಬೆಂಗಳೂರು
ಹೇಮಂತ್ ಕುಮಾರ್, ಡಿವೈಎಸ್ಪಿ ಎಸ್ಐಟಿ ಬೆಂಗಳೂರು
ಮಂಜುನಾಥ್, ಡಿವೈಎಸ್ಪಿ ಎಸಿಬಿ, ಮಂಡ್ಯ
ಅರುಣ್ ನಾಗೇಗೌಡ, ಡಿವೈಎಸ್ಪಿ, ಶ್ರೀರಂಗಪಟ್ಟಣ ಸಬ್ ಡಿವಿಎಸ್, ಮಂಡ್ಯ
ಹೆಚ್.ಬಿ ರಮೇಶ್ ಕುಮಾರ್, ಡಿವೈಎಸ್ಪಿ, ಬೆಂಗಳೂರು.
ಸಿ.ಎನ್ ದಿವಾಕರ್, ಸಿಪಿಐ ಕೊಡಗು ಪೊಲೀಸ್ ಠಾಣೆ
ಬಿ.ಎ ಲಕ್ಷ್ಮಿ ನಾರಾಯಣ್, ಪಿಎಸ್ಐ ಸಿಸಿಬಿ, ಬೆಂಗಳೂರು
ಕೆ. ಜಯಪ್ರಕಾಶ್, ಪಿಎಸ್ಐ ವೈರ್ಲೆಸ್, ಮಂಗಳೂರು
ಅತೀಕ್ ಯು.ಆರ್ ರೆಹಮಾನ್, ಎಎಸ್ಐ, ಆಗುಂಬೆ
ಆರ್. ಎನ್ ಬಾಳೀಕಾಯ್, ಎಎಸ್ಐ, ರಾಣಿ ಬೆನ್ನೂರ್ ಪೊಲೀಸ್ ಠಾಣೆ
Advertisement