ಕೆರೆಗಳ ಅಭಿವೃದ್ಧಿಯಲ್ಲಿ ಇಡೀ ರಾಜ್ಯಕ್ಕೆ ಸಂಡೂರು ಮಾದರಿ: ಶಾಸಕ ತುಕಾರಾಂ

ಸಂಡೂರು ತಾಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ಇಡೀ ರಾಜ್ಯದಲ್ಲಿಯೇ ಅತ್ಯಂತ ಮಾದರಿ ತಾಲೂಕ್ ಆಗಿ ಮಾಡಲಾಗುವುದು ಎಂದು ಶಾಸಕ ಈ.ತುಕಾರಾಂ ಭರವಸೆ ನೀಡಿದ್ದಾರೆ
ಸಚಿವ ಮಾಧುಸ್ವಾಮಿ, ಶಾಸಕ ಇ. ತುಕಾರಾಂ ಮತ್ತಿತರರು
ಸಚಿವ ಮಾಧುಸ್ವಾಮಿ, ಶಾಸಕ ಇ. ತುಕಾರಾಂ ಮತ್ತಿತರರು
Updated on

ಹೊಸಪೇಟೆ: ಸಂಡೂರು ತಾಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ಇಡೀ ರಾಜ್ಯದಲ್ಲಿಯೇ ಅತ್ಯಂತ ಮಾದರಿ ತಾಲೂಕ್ ಆಗಿ ಮಾಡಲಾಗುವುದು ಎಂದು ಶಾಸಕ ಈ.ತುಕಾರಾಂ ಭರವಸೆ ನೀಡಿದ್ದಾರೆ

ಹೊಸಪೇಟೆಯ ಕೃಷ್ಣ ಪ್ಯಾಲೇಸ್ ಹೋಟಲ್ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯದ ಕೆರೆಗಳನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿ(ಸಿಎಸ್ಆರ್) ಅಭಿವೃದ್ಧಿಪಡಿಸಲು ಕಾರ್ಪೋರೆಟ್ ಸಂಸ್ಥೆಗಳೊಂದಿಗೆ ಹಾಗೂ ಉದ್ಯಮಿಗಳೊಂದಿಗೆ ಪೂರ್ವಭಾವಿ ಸಭೆಯಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು

ಸಂಡೂರು ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ‌ ವ್ಯಾಪ್ತಿ ಅಡಿ 18ಕೆರೆಗಳು ಹಾಗೂ ಜಿಪಂ ಅಡಿ 41ಕೆರೆಗಳು ಬರುತ್ತಿದ್ದು,ಅವುಗಳನ್ನು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಉದ್ಯಮಿಗಳ ಸಹಾಯ,ಸಹಕಾರ ಪಡೆದು ಇಡೀ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು. ರಾಜ್ಯ ಸರಕಾರ ಕೈಗೆತ್ತಿಕೊಂಡಿರುವ ಈ ಯೋಜನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು

ಸಂಸದ ವೈ.ದೇವೇಂದ್ರಪ್ಪ  ಮಾತನಾಡಿ, ಈ ಯೋಜನೆಗೆ ಸಹಕರಿಸಬೇಕು, ತಮ್ಮ ವ್ಯಾಪ್ತಿಯಲ್ಲಿನ ಕೆರೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು‌ ಮನವಿ ಮಾಡಿದರು.ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳನ್ನು ಭರ್ತಿ ಮಾಡಿಸಲಾಗುವುದು ಎಂದರು‌.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಮೃತ್ಯುಂಜಯ ಸ್ವಾಮಿ, ಕಾರ್ಪೋರೇಟ್ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳು ಇದ್ದರು.

ವರದಿ: ಸುಬಾನಿ ಪಿಂಜರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com