ಬೆಂಗಳೂರು: ಹೃದ್ರೋಗದಿಂದ ಬಳಲುತ್ತಿದ್ದ ನಲವತ್ತು ದಿನಗಳ ಪುಟ್ಟಮಗವನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಗ್ರೀನ್ ಝೀರೋ ಟ್ರಾಫಿಕ್ ಮೂಲಕ ಗುರುವಾರ ಸಾಗಿಸಲಾಗಿದೆ.
40 ದಿನಗಳ ಹೃದ್ರೋಗಿ ಪುಟ್ಟ ಕಂದಮ್ಮ ನನ್ನು ಹೊತ್ತ ಅಂಬುಲೆನ್ಸ್ ಗೆ ಮಾರ್ಗದುದ್ದಕೂ ಪೊಲೀಸ್ ಇಲಾಖೆ ಹಸಿರು ಕಾರಿಡಾರ್ ಕಲ್ಪಿಸಿತ್ತು. 40 ದಿನಗಳ ಸೈಫುಲ್ ಅಂಜುಮಾನ್ ಎಂಬ ಹೆಸರಿನ ಮಗುವಿಗೆ ತಪಾಸಣೆ ವೇಳೆ ಹೃದಯ ಸಂಬಂಧಿ ರೋಗವಿದೆ ಎಂಬುದು ಪತ್ತೆಯಾಯಿತು. ಪ್ರಾಥಮಿಕ ಚಿಕಿತ್ಸೆ ಕಲ್ಪಿಸಿದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೂಡಲೇ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದರು.
Advertisement