ಆನಂದ್ ಸಿಂಗ್ ಗೆ ಅರಣ್ಯ ಖಾತೆಗೆ 'ಕ್ಯಾತೆ': ಸಚಿವ ಸ್ಥಾನದಿಂದ ತೆಗೆಯುವಂತೆ ಒತ್ತಾಯ

ಆನಂದ್ ಸಿಂಗ್ ಅವರನ್ನು ಖಾತೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಸಹಿ ಅಭಿಯಾನ ಆರಂಭಿಸಲಾಗಿದೆ.  ಈ ಸಂಬಂಧ ಸಿಎಂಗೆ ಮನವಿ ಕೂಡ ಸಲ್ಲಿಸಲಾಗಿದೆ.
ಆನಂದ್ ಸಿಂಗ್
ಆನಂದ್ ಸಿಂಗ್
Updated on

ಬೆಂಗಳೂರು:  ಶಾಸಕ ಆನಂದ್ ಸಿಂಗ್, ಅರಣ್ಯ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಹಲವಾರು ಮಂದಿ  ವಿರೋಧ ವ್ಯಕ್ತ ಪಡಿಸಿದ್ದಾರೆ.

ಆನಂದ್ ಸಿಂಗ್ ಅವರನ್ನು ಖಾತೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಸಹಿ ಅಭಿಯಾನ ಆರಂಭಿಸಲಾಗಿದೆ.  ಈ ಸಂಬಂಧ ಸಿಎಂಗೆ ಮನವಿ ಕೂಡ ಸಲ್ಲಿಸಲಾಗಿದೆ.

ಸಿಎಂ ಯಡಿಯೂರಪ್ಪ ಯಾರೂ ಯೋಜಿಸಲಾಗದಂತ ಕೆಲಸ ಮಾಡಿದ್ದಾರೆ. ಅರಣ್ಯ ಇಲಾಖೆಯೇ ಹಲವು ಪ್ರಕರಣಗಳ ಸಂಬಂಧ 15 ಕೇಸ್ ದಾಖಲಿಸಿದೆ, ಅಂತವರಿಗೆ ಅರಣ್ಯ ಖಾತೆ ನೀಡಿದ್ದಾರೆ, ಎಂದು ಚೇಂಜ್.org ಅರ್ಜಿ ಸಲ್ಲಿಸಿದೆ,. ಆನಂದ್ ಸಿಂಗ್ ರಾಜಿನಾಮೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕೇವಲ 2 ಗಂಟೆಗಳಲ್ಲಿ 130 ಸಹಿ ಸಂಗ್ರಹವಾಗಿವೆ,

ಆನಂದ್ ಸಿಂಗ್ ವಿರುದ್ದ ದಾಖಲಾಗಿರುವ ಕೇಸ್ ಗಳ ಸಂಬಂಧ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. 

ಯಡಿಯೂರಪ್ಪ ಮತ್ತು ಕರ್ನಾಟಕ ಬಿಜೆಪಿ ಸರ್ಕಾರ ಮಾಡಿದ ಉದ್ದೇಶಪೂರ್ವಕ ತಪ್ಪಿನಿಂದಾಗಿ ಜನತೆಗೆ ಬಿಜೆಪಿ  ಸರ್ಕಾರದ ಮೇಲೆ ವಿಶ್ವಾಸ ಹೋಗಿದೆ ಎಂದು ಹೇಳಲಾಗಿದೆ.

ಅರಣ್ಯ ಇಲಾಖೆಯ ಹಲವು ಅಧಿಕಾರಿಗಳು ಆನಂದ್ ಸಿಂಗ್ ನೇಮಕಕ್ಕೆ  ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.  ಆದರೆ ಸಿಎಂ ನಿರ್ಧಾರ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com