ನಿಖಿಲ್-ರೇವತಿ ವಿವಾಹದಿಂದ ಮತ್ತಷ್ಟು ಗಟ್ಟಿಯಾಗಲಿದೆ ಜೆಡಿಎಸ್-ಕಾಂಗ್ರೆಸ್ ಬಂಧ!

ರಾಜಕೀಯ ವಿವಾಹಗಳು ಸಂಬಂಧಗಳನ್ನು ಬೆಸೆಯಲು ಕಾರಣವಾಗುತ್ತವೆ ಎಂಬುದನ್ನು ಕೇಳಿದ್ದೇವೆ, ರೇವತಿ- ನಿಖಿಲ್ ಕುಮಾರ್ ವಿವಾಹ ಕೂಡ ಇದೇ ರೀತಿಯಲ್ಲಿ ಸಾಗುತ್ತಿದೆ.
ರೇವತಿ- ನಿಖಿಲ್
ರೇವತಿ- ನಿಖಿಲ್

ಬೆಂಗಳೂರು:  ರಾಜಕೀಯ ವಿವಾಹಗಳು ಸಂಬಂಧಗಳನ್ನು ಬೆಸೆಯಲು ಕಾರಣವಾಗುತ್ತವೆ ಎಂಬುದನ್ನು ಕೇಳಿದ್ದೇವೆ, ರೇವತಿ- ನಿಖಿಲ್ ಕುಮಾರ್ ವಿವಾಹ ಕೂಡ ಇದೇ ರೀತಿಯಲ್ಲಿ ಸಾಗುತ್ತಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧ್ಯತೆ ಇರಲಿ, ಇಲ್ಲದಿರಲಿ, ಆದರೆ ನಿಖಿಲ್ ರೇವತಿ  ವಿವಾಹ ಎಲ್ಲಾ ಮದುವೆಗಳ ತಾಯಿಯಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ,  ರೇವತಿ-ನಿಖಿಲ್ ವಿವಾಹಕ್ಕೆ ಇನ್ನೂ ಕೇವಲ 62 ದಿನ ಮಾತ್ರ ಬಾಕಿ ಉಳಿದಿದೆ, ಕನಸಿನ ಮದುವೆಗಾಗಿ ಎಲ್ಲಾ ರೀತಿಯ ಸಿದ್ಧತೆ ಆರಂಭವಾಗಿದೆ, 

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 57 ಎಕರೆ ಜಮೀನು ಕಲ್ಯಾಣ ಮಂಟಪವಾಗಿ ಬದಲಾಗುತ್ತಿದೆ. ಬೆಂಗಳೂರಿನಿಂಗ ಸುಮಾರು ಒಂದೂವರೆ ಗಂಟೆ ಪ್ರಯಾಣಿಸಿದರೇ ಈ ಸ್ಥಳ ಸಿಗುತ್ತದೆ, ಆದರೆ ಇಲ್ಲಿ ಯಾವುದೇ ಟ್ರಾಫಿಕ್ ಸಮಸ್ಯೆ ಇರುವುದಿಲ್ಲ.

ಇನ್ನೂ ಮದುವೆ ಸ್ಥಳದಲ್ಲಿ ವಿವಿಐಪಿ ಗ್ಯಾಲಕ್ಸಿ ಧರೆಗಿಳಿಯಲಿದೆ.  ಏಕೆಂದರೇ ವಧು-ವರರ ಎರಡು ಕುಟುಂಬಗಳು ರಾಜಕೀಯವಾಗಿ ಪ್ರಭಾವಿಶಾಲಿಗಳೇ, ವಿಐಪಿಗಳಿಗಾಗಿ 5 ಲಕ್ಷ ಆಹ್ವಾನ ಪತ್ರಿಕೆ ಮುದ್ರಣವಾಗುತ್ತಿವೆ,  ಈ ವಿವಾಹಕ್ಕೆ ರಾಜ್ಯದ ಉದ್ದ ಮತ್ತು ಅಗಲವಾಗಿ ಪ್ರತಿ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸಲಾಗುತ್ತದೆ.

ಕೆಲ ದಿನಗಳ ಹಿಂದೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಲವು ಪ್ರಮುಖರು ಹಾಜರಾಗಿದ್ದರು. ಇನ್ನೂ ವಿವಾಹ ಮಹೋತ್ಸವಕ್ಕೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.  ಸ್ಟಾಲಿನ್, ಜಗಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕ ಗಣ್ಯರು ಪಾಲ್ಗೋಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ ಸೇರಿದಂತೆ ಹಲವು ರಾಷ್ಚ್ರೀಯ ನಾಯಕರು ಮತ್ತು ಸ್ಯಾಂಡಲ್ ವುಡ್ ಕಲಾವಿದರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com