ಇಂಧನ ಕ್ಷಮತೆಗಾಗಿ ಕೆಎಸ್‌ಆರ್‌ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ

ಈ ಬಾರಿ ಇಂಧನ ಕ್ಷಮತೆಗಾಗಿ ಕೆಎಸ್‌ಆರ್‌ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ ಸಂದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೇಂದ್ರ ಸರ್ಕಾರದ ಪೆಟ್ರೊಲಿಯಂ ಮತ್ತು ನೈಸಗಿಕ ಅನಿಲ ಸಚಿವಾಲಯದಡಿ ಕರ್ತವ್ಯ ನಿರ್ವಹಿಸುವ ಸಂಸ್ಥೆ ಹಾಗೂ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯು ಪ್ರತಿ ವರ್ಷ ದೇಶದಾದ್ಯಂತ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಇಂಧನ ಕ್ಷಮತಾ ಮಹೋತ್ಸವ ಕಾರ್ಯಕ್ರಮ ಏರ್ಪಡಿಸುತ್ತಿದೆ. 

ಈ ಬಾರಿ ಇಂಧನ ಕ್ಷಮತೆಗಾಗಿ ಕೆಎಸ್‌ಆರ್‌ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ ಸಂದಿದೆ. 

ಅಕ್ಟೋಬರ್ - ೨೦೧೮ ರಿಂದ ಸೆಪ್ಟೆಂಬರ್-೨೦೧೯ ರ ಅವಧಿಯಲ್ಲಿ ಇಂಧನ ಕ್ಷಮತೆ ಸಾಧಿಸಿದ ಈ ಘಟಕಗಳಿಗೆ ಪ್ರಶಸ್ತಿ ಲಭಿಸಿದ್ದು, ಕಬ್ಬನ್ ಪಾರ್ಕ್ ನ ಜವಾಹರ್ ಬಾಲಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಈ ಘಟಕಗಳಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ನಿಗಮದ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳು ಕೆಎಂಪಿಎಲ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಹಿನ್ನಲೆಯಲ್ಲಿ ಇಂಧನ ಕ್ಷಮತೆಗಾಗಿ ರಾಜ್ಯ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಯ ಮೂರು ಘಟಕಗಳಿಗೆ ಅತ್ಯುತ್ತಮ ಘಟಕಗಳ ಪ್ರಶಸ್ತಿ ಹಾಗೂ ತಲಾ 50 ಸಾವಿರ ರೂ ನಗದು ಬಹುಮಾನ, ಪ್ರಶಸ್ತಿ ಫಲಕಕ್ಕೆ ಪಾತ್ರವಾಗಿವೆ ಎಂದು ಕೆ.ಎಸ್ಅರ್.ಟಿ.ಸಿ. ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com