ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ 10 ಕಿ.ಮೀ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗೆ ತಡೆ ನೀಡಿದ ಹೈಕೋರ್ಟ್

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (ಬಿಎನ್‌ಪಿ) 10 ಕಿ.ಮೀ ವ್ಯಾಪ್ತಿಯಲ್ಲಿ “ನಿರೀಕ್ಷಿತ” ವಾಣಿಜ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ಬಂಧಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.್ ಗುರುವಾರ ಈ ಸಂಬಂಧ ಮಧ್ಯಂತರ ಆದೇಶಾ ಹೊರಡಿಸಿದ್ದ ಹೈಕೋರ್ಟ್ ಈಗಾಗಲೇ ಕೈಗೊಂಡ ವಾಣಿಜ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳ ಮೇಲೆ ಈ ಆದೇಶ ಅನ್ವಯಿಸುವುದಿಲ್ಲ ಎಂದೂ ಹೇಳಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ 10 ಕಿ.ಮೀ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗೆ ತಡೆ ನೀಡಿದ ಹೈಕೋರ್ಟ್
Updated on

ಬೆಂಗಳೂರು:  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (ಬಿಎನ್‌ಪಿ) 10 ಕಿ.ಮೀ ವ್ಯಾಪ್ತಿಯಲ್ಲಿ “ನಿರೀಕ್ಷಿತ” ವಾಣಿಜ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ಬಂಧಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.್ ಗುರುವಾರ ಈ ಸಂಬಂಧ ಮಧ್ಯಂತರ ಆದೇಶಾ ಹೊರಡಿಸಿದ್ದ ಹೈಕೋರ್ಟ್ ಈಗಾಗಲೇ ಕೈಗೊಂಡ ವಾಣಿಜ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳ ಮೇಲೆ ಈ ಆದೇಶ ಅನ್ವಯಿಸುವುದಿಲ್ಲ ಎಂದೂ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದಂಗೌಡರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಬನ್ನೇರುಘಟ್ಟ ನೇಚರ್ ಕನ್ಸರ್ವೇಶನ್ ಟ್ರಸ್ಟ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಆಲಿಸಿದ ನಂತರ ಈ ಆದೇಶವನ್ನು ನೀಡಿತು.ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯವು ಬಿಎನ್‌ಪಿ ಸುತ್ತಮುತ್ತಲಿನ ಸ್ಥಳಗಳಲ್ಲಿ ಪರಿಸರ ವಿಜ್ಞಾನದ ಸ್ಥಾಪಿತ ಸತ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ, ಅರ್ಜಿದಾರರು 2016 ರ ಕರಡು ಅಧಿಸೂಚನೆಯನ್ನು "ಯಾವುದೇ ಬದಲಾವಣೆಗಳಿಲ್ಲದೆ" ಅಂತಿಮಗೊಳಿಸಲು ಸಚಿವಾಲಯಕ್ಕೆ ನಿರ್ದೇಶನಗಳನ್ನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು.

ಡೀಮ್ಡ್ ಪರಿಸರ ಸಂವೇದನಾ ವಲಯದಲ್ಲಿ (ಇಎಸ್ ಇ ಝರ್)ಣಿಗಾರಿಕೆಗೆ ಪರವಾನಗಿ ನಿರಾಕರಿಸಿದ ಗಣಿ ಇಲಾಖೆಯನ್ನು ಹೊರತುಪಡಿಸಿ, ವಸತಿ ಮಂಡಳಿಯಂತಹ ಇತರ ಎಲ್ಲಾ ಶಾಸನಬದ್ಧ ಸಂಸ್ಥೆಗಳು  ಈ ಪ್ರದೇಶದಲ್ಲಿ ಚಟುವಟಿಕೆಗಳಿಗೆ ಅನುಮತಿ ನೀಡಿವೆ ಅರ್ಜಿದಾರರು ವಾದಿಸಿದರು. ಇಎಸ್ಇಝಡ್ ಬಗ್ಗೆ ಅನಿಶ್ಚಿತತೆ ಮುಂದುವರಿದರೆ ಗಣಿಗಾರಿಕೆಗೆ ಅನುಮತಿ ನೀಡುವ ಸಾಧ್ಯತೆ ನಿಚ್ಚಳವಾಗಿದೆ ಅನಿಶ್ಚಿತತೆಯ ಲಾಭವನ್ನು ಪಡೆದುಕೊಂಡು, ಈ ಪ್ರದೇಶವು ಅಭಿವೃದ್ಧಿ ಚಟುವಟಿಕೆಗಳಾದ ವಾಟರ್ ಬಾಟ್ಲಿಂಗ್, ಖಾಸಗಿ ವಸತಿ ನಿರ್ಮಾಣ ಃಆಗೂ  ರಸ್ತೆಗಳ ಡಾಂಬರು ಹಾಕುವಿಕೆಯನ್ನು ನಡೆಸಲಾಗುತ್ತಿದೆ ಎಂದು ಅರ್ಜಿ ವಿವರಿಸಿದೆ "2016 ರ ಕರಡು ಅಧಿಸೂಚನೆಯನ್ನು ಅನುಮತಿಸುವ ಮೂಲಕ, ಯಾವುದೇ ಆಕ್ಷೇಪಣೆಗಳಿಲ್ಲದಿದ್ದರೂ, ಸಚಿವಾಲಯವು ಪರಿಸರ ಸಂರಕ್ಷಣೆಯ ಬಗ್ಗೆ ತನ್ನ ಕಠಿಣಮನೋಭಾವವನ್ನು ಪ್ರದರ್ಶಿಸಿದೆ. 2018 ರ ಅಧಿಸೂಚನೆಯನ್ನು ಪರಿಚಯಿಸುವ ಮೂಲಕ, ಸಚಿವಾಲಯದ ವರ್ತನೆಯು ಅಪಾಯಕಾರಿ ತಿರುವು ಪಡೆದುಕೊಂಡಿದೆ, ಇದು ವನ್ಯಜೀವಿ (ಸಂರಕ್ಷಣೆ) ಕಾಯ್ದೆಯ ಉದ್ದೇಶವನ್ನು ವಿಫಲಗೊಳಿಸಲು ಕಾರಣವಾಗಬಹುದು ”ಎಂದು ಅರ್ಜಿದಾರರು ತಿಳಿಸಿದ್ದಾರೆ.

“ಬಿಎನ್‌ಪಿಯಿಂದ ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ ಮತ್ತು ಅದರಾಚೆ ಇತರ ಸಂರಕ್ಷಿತ ಪ್ರದೇಶಗಳಿಗೆ ಆನೆಗಳ ಚಲನೆಯನ್ನು ಖಚಿತಪಡಿಸಿಕೊಳ್ಳಲು 2016 ರ ಕರಡು ಅಧಿಸೂಚನೆಯಲ್ಲಿ ವಿವರಿಸಿರುವ ಪ್ರದೇಶಗಳನ್ನು ಸೇರಿಸುವುದು ಬಹಳ ಮುಖ್ಯ. 2018 ರ ಕರಡು ಅಧಿಸೂಚನೆಯಲ್ಲಿ ತೋರಿಸಿರುವಂತೆ ಬಿಎನ್‌ಪಿ ಸುತ್ತಮುತ್ತಲಿನ ಇಎಸ್‌ ಇಝಡ್ ನ ವಿಸ್ತೀರ್ಣ ಮತ್ತು ವ್ಯಾಪ್ತಿಯು ಬಿಎನ್‌ಪಿಯ ಕಿರಿದಾದ ಭಾಗಗಳ ಸುತ್ತಲಿನ ಪರಿಸರ-ಸೂಕ್ಷ್ಮ ಪ್ರದೇಶಗಳನ್ನು ಹೊರಗಿಡಲು ಕಾರಣವಾಗಿದೆಬಿಎನ್‌ಪಿಯ ದೀರ್ಘಕಾಲೀನ ಸಂರಕ್ಷಣೆಗೆ ಈ ಪರಿಸರ ಸೂಕ್ಷ್ಮ ಪ್ರದೇಶಗಳು ನಿರ್ಣಾಯಕವಾಗಿವೆ ”ಎಂದು ಅರ್ಜಿದಾರರು ತಿಳಿಸಿದ್ದಾರೆ..

ಇದೇ ವೇಳೆ ಇನ್ನೊಂದು ಪ್ರಕರಣದಲ್ಲಿ ಅಕ್ರಮ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳಲು ಮಾದರಿ ಉಪ-ಕಾನೂನುಗಳನ್ನು ಅಳವಡಿಸಿಕೊಳ್ಳಲು ಪಂಚಾಯತ್ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸ್ಥಳೀಯ ಸಂಸ್ಥೆಗಳು ಅವುಗಳನ್ನು ಸಮ್ಮತಿಸುವ ನಿರ್ಣಯಗಳನ್ನು ಅಂಗೀಕರಿಸಿದರೆ ಮಾತ್ರ ಉಪ-ಕಾನೂನುಗಳು ಅನ್ವಯವಾಗುತ್ತವೆ ಎಂದು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದಂಗೌಡರ್ ಅವರ ವಿಭಾಗೀಯ ಪೀಠವು ಸ್ಥಳೀಯ ಸಂಸ್ಥೆಗಳಿಗೆ “ಒಂದು ತಿಂಗಳಲ್ಲಿ” ಅಳವಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com