ಆಕ್ಸಿಜನ್ ಕೊರತೆಯಿಂದ ಸಾವು: ಸಂತ್ರಸ್ತೆಯ ಪುತ್ರನ ವಿಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ

ಆಕ್ಸಿಜನ್ ಕೊರತೆಯಿಂದ ಇ‌ಎಸ್ ಐಸಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ‌ ಎಂದು ಜಿಲ್ಲಾಧಿಕಾರಿ ಹೇಳಿಕೆಯ ಬೆನ್ನಲ್ಲೆ ಸಂತ್ರಸ್ತೆಯ ಮಗನ ವಿಡಿಯೋ ಈಗ ವೈರಲ್ ಆಗಿದೆ.
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ

ಕಲಬುರಗಿ: ಆಕ್ಸಿಜನ್ ಕೊರತೆಯಿಂದ ಇ‌ಎಸ್ ಐಸಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ‌ ಎಂದು ಜಿಲ್ಲಾಧಿಕಾರಿ ಹೇಳಿಕೆಯ ಬೆನ್ನಲ್ಲೆ ಸಂತ್ರಸ್ತೆಯ ಮಗನ ವಿಡಿಯೋ ಈಗ ವೈರಲ್ ಆಗಿದೆ.

ಆಕ್ಸಿಜನ್ ಇಲ್ಲ ಎಂದು ಇಎಸ್ ಐಸಿಯಿಂದ ಜಿಮ್ಸ್ ಗೆ ಮಹಿಳೆಯೊಬ್ಬರನ್ನು ಸ್ಥಳಾಂತರ ಮಾಡಿದ ನಂತರ ಆ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಲಾದ ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಮಗ ಮಾತನಾಡಿದ ವಿಡಿಯೋವನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಶೇರ್ ಮಾಡಿ, ಟ್ವೀಟ್ ಮಾಡುವ ಮೂಲಕ ಸರ್ಕಾರದ ನಡೆ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇಎಸ್ ಐಸಿಯಲ್ಲಿ ಏನೂ ನಡೆದೇ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ನೊಂದಿತ ಮಹಿಳೆಯ ಮಗನ ಮಾತುಗಳನ್ನು ಒಮ್ಮೆ ಕೇಳಿನೋಡಿ. ರೋಗಿ ಗುಣಮುಖರಾಗುತ್ತಿದ್ದರೂ ಅವರ ಮನೆಯವರ ಗಮನಕ್ಕೆ ತರದೆ ಇಎಸ್ ಐಸಿಯಿಂದ ಜಿಮ್ಸ್ ಗೆ ವರ್ಗಾಯಿಸಲಾಗಿದೆ. ಹಾಗೆ ಮಾಡಿರುವುದಕ್ಕೆ ಕಾರಣ ಕೇಳಿದರೆ ಇಎಸ್ ಐಸಿನಲ್ಲಿ ಆಕ್ಸಿಜನ್ ಕೊರತೆ‌ ಇದೆಯೆಂದು ಹೇಳಲಾಗಿದೆ ಎಂದು ಶಾಸಕರು ಟ್ವಿಟ್ಟರ್ ನಲ್ಲಿ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com