ಕಾರ್ಮಿಕರು, ಭೂಮಿಯ ಸಂಬಂಧಿ ಕಾನೂನು ಮತ್ತಷ್ಟು ಸರಳೀಕರಣ: ಜಗದೀಶ್ ಶೆಟ್ಟರ್
ಬೆಂಗಳೂರು: ಲಾಕ್ಡೌನ್ನಿಂದಾಗಿ ಲಕ್ಷಾಂತರ ಕೋಟಿ ರೂ, ನಷ್ಟ ಅನುಭವಿಸಿದ್ದ ಕೈಗಾರಿಕಾ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ.ಗಳ ಹೂಡಿಕೆ ಗುರಿಯನ್ನು ಹೊಂದಿದ್ದಾಗಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅಲ್ಲದೆ ಇದೇ ಅವಧಿಯಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿರುವುದಾಗಿ ಸಹ ಅವರು ಭರವಸೆ ನೀಡಿದ್ದಾರೆ.
ಇದನ್ನು ಸಾಧಿಸುವುದಕ್ಕಾಗಿ ಸಚಿವ ಶೆಟ್ಟರ್ ಕರಡು ತಯಾರಿ ಹಾಗೂ ಕ್ಯಾಬಿನೆಟ್ ಹೊಸ ಕೈಗಾರಿಕಾ ನೀತಿಯನ್ನು 2020-2025 ಅನುಮೋದಿಸಲು ಒತ್ತಾಯಿಸಿದ್ದಾರೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವುದರಿಂದ ಹಿಡಿದು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಗಳವರೆಗೆ, ಹೂಡಿಕೆಗಳನ್ನು ಆಕರ್ಷಿಸಲು ನೀತಿ ಬದಲಾವಣೆಗೆ ಶೆಟ್ಟರ್ ಪ್ರಮುಖ ಒತ್ತಾಸೆಯಾಗಲಿದ್ದಾರೆ.
ಕೈಗಾರಿಕಾ ನೀತಿ ಸುಧಾರಣೆಯ ಆಲೋಚನೆಯು ಕಳೆದ ವರ್ಷ ದಾವೋಸ್ನಲ್ಲಿ ಶೆಟ್ಟರ್ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರೊಂದಿಗೆ ಡಬ್ಲ್ಯುಇಎಫ್ಗೆ ತೆರಳಿದ್ದಾಗಲೇ ಮೊಳಕೆಯೊಡೆದಿತ್ತು. ಇಂದು ಅದು ಗಿಡವಾಗಿ ಬೆಳೆಯುತ್ತಿದೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ