ಚಿಕ್ಕೋಡಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್​ಗೆ ಊಟ ಹಾಕಿದ್ದ ಅಜ್ಜಿ ನಿಧನ

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರಿಗೆ ಊಟ ಹಾಕಿ ಉಪಚರಿಸಿದ್ದ ಚಿಕ್ಕೋಡಿಯ ಅಜ್ಜಿಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ಜಗಣಭೀ ಪಟೇಲ್
ಜಗಣಭೀ ಪಟೇಲ್
Updated on

ಚಿಕ್ಕೋಡಿ: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರಿಗೆ ಊಟ ಹಾಕಿ ಉಪಚರಿಸಿದ್ದ ಚಿಕ್ಕೋಡಿಯ ಅಜ್ಜಿಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

ಜಗಣಭೀ ಪಟೇಲ್ (108)‌ 1927ರಲ್ಲಿ ಅಂಬೇಡ್ಕರ್ ಚಿಕ್ಕೋಡಿಗೆ ಆಗಮಿಸಿದ್ದ ವೇಳೆ ಅವರಿಗೆ ಊಟೋಪಚಾರ ನೆರವೇರಿಸಿದ್ದರು.

ಅಂಬೇಡ್ಕರ್ ಮಹಾರಾಷ್ಟ್ರದ ಔರವಾಡ ಗ್ರಾಮದ ದೇವಸ್ಥಾನದ ಜಮೀನು ವಿವಾದ ವಿಚಾರಣೆ ಕೈಗೊಡ ವೇಳೆ ಚಿಕ್ಕೋಡಿಗೆ ಆಗಮಿಸಿದ್ದರು. ಆ ವೇಳೆ ಜಗಣಭೀ ಪಟೇಲ್ ಅಂಬೇಡ್ಕರ್ ಅವರಿಗೆ ಅಗತ್ಯ ಊಟೋಪಚಾರ ಸಿದ್ದಪಡಿಸಿ ಉಪಚರಿಸಿದ್ದರು. ತಾಲೂಕಿನ ಕರೋಶಿ ಗ್ರಾಮದಲ್ಲಿ 9 ದಿನ ತಂಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್​ಗೆ ಅಗತ್ಯ ಊಟ, ಉಪಹಾರದ ವ್ಯವಸ್ಥೆಯನ್ನು ಇವರು ನೋಡಿಕೊಂಡಿದ್ದರು. 

ತನಗೆ ಊಟ ಹಾಕಿ ಉಪಚರಿಸಿದ ಜಗಣಭೀ ಅವರನ್ನು ಅಂಬೇಡ್ಕರ್ ಪ್ರೀತಿಯಿಂದ "ಮುನ್ನಿ " ಎಂದು ಕರೆದಿದ್ದರು. ಇಂದು ಜಗಣಭೀ ಅಜ್ಜಿಯು ಅವರ ಸ್ವಗ್ರಾಮ ಕರೋಶಿಯಲ್ಲಿ ಅಸುನೀಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com