ಕೊರೋನಾ ಟ್ರ್ಯಾಜೆಡಿ: ಖಿನ್ನತೆಯಿಂದ ಕೊಡಗಿನ ನಿವೃತ್ತ ಯೋಧ ಆತ್ಮಹತ್ಯೆ

ಕೊರೋನಾ ಲಾಕ್ಡೌನ್ ನಿಮಿತ್ತ ಮೂರು ತಿಂಗಳಿನಿಂಡ ಮನೆಯಲ್ಲೇ ಇದ್ದ ನಿವೃತ್ತ ಯೋಧರೊಬ್ಬರು ಖಿನ್ನತೆಗೊಳಗಾದ ಪರಿಣಾಮ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನ ಮಡಿಕೇರಿ ತಾಲ್ಲೂಕಿನ ಚೋಣಕೆರೆ ಗ್ರಾಮದಲ್ಲಿ ನಡೆದಿದೆ.
ಉತ್ತಯ್ಯ
ಉತ್ತಯ್ಯ

ಮಡಿಕೇರಿ: ಕೊರೋನಾ ಲಾಕ್ಡೌನ್ ನಿಮಿತ್ತ ಮೂರು ತಿಂಗಳಿನಿಂಡ ಮನೆಯಲ್ಲೇ ಇದ್ದ ನಿವೃತ್ತ ಯೋಧರೊಬ್ಬರು ಖಿನ್ನತೆಗೊಳಗಾದ ಪರಿಣಾಮ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನ ಮಡಿಕೇರಿ ತಾಲ್ಲೂಕಿನ ಚೋಣಕೆರೆ ಗ್ರಾಮದಲ್ಲಿ ನಡೆದಿದೆ.

ಯೋಧ ಉತ್ತಯ್ಯ (74)  ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು ತಮ್ಮ ಮನೆಯಲ್ಲಿನ ಕೋಣೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುಂಡು ಹಾರಿಸಿಕೊಂಡ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದ ಪರಿಣಾಮ ಉತ್ತಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮೃತರು ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ. 

ಘಟನೆ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com