ಶ್ರೀಶ್ರೀ ರವಿಶಂಕರ್ ಆಶ್ರಮದ ಸಾಕಾನೆಗೆ ಮಾವುತ ಬಲಿ

ಸಾಕು ಆನೆಯೊಂದು ಮಾವುತನನ್ನು ಕಾಲಿನಿಂದ ತುಳಿದು ಸಾಯಿಸಿರುವ ಘಟನೆ ನಗರ ಹೊರವಲಯದಲ್ಲಿರುವ ಶ್ರೀಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ವರದಿಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾಕು ಆನೆಯೊಂದು ಮಾವುತನನ್ನು ಕಾಲಿನಿಂದ ತುಳಿದು ಸಾಯಿಸಿರುವ ಘಟನೆ ನಗರ ಹೊರವಲಯದಲ್ಲಿರುವ ಶ್ರೀಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ವರದಿಯಾಗಿದೆ. 

ಕೇರಳ ಮೂಲದ 34 ವರ್ಷದ ರಾಜೇಶ್ ಮೃತ ಮಾವುತ. ಮೇವು ಹಾಕಲು ತೆರಳಿದ್ದಾಗ ಮದವೇರಿದ ಆನೆ ಏಕಾಏಕೀ ಕಾಲಿನಿಂದ ತುಳಿದು ಮಾವುತನನ್ನು ಸಾಯಿಸಿದೆ ಎನ್ನಲಾಗಿದೆ.

ರವಿಶಂಕರ್ ಗುರೂಜಿ ಅವರು ಆಶ್ರಮದಲ್ಲಿ ಎರಡು ಆನೆಗಳನ್ನು ಸಾಕಿದ್ದು, ಸುಮಾರು 8 ವರ್ಷಗಳಿಂದ ರಾಜೇಶ್, ಆನೆಗಳ ಪಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com