ರಾಮನಗರ: ಕುಡಿದ ಮತ್ತಿನಲ್ಲಿ ಮಾಗಡಿ ಶಾಸಕ ಮಂಜುನಾಥ್ ಗೆ ಗ್ರಾಮಸ್ಥನ ಆವಾಜ್!

ರಾಜ್ಯಾದ್ಯಂತ ಎಣ್ಣೆ ಅಂಗಡಿ ಓಪನ್ ಆಗುತ್ತಿದ್ದಂತೆ ಕುಡುಕರ ಗಲಾಟೆ, ಗದ್ದಲ, ಜೋರಾಗಿ ಸದ್ದು ಮಾಡುತ್ತಿದೆ. ಕುಡಿದ ಮತ್ತಿನಲ್ಲಿ ಗ್ರಾಮಸ್ಥರೊಬ್ಬರು ಆವಾಜ್ ಹಾಕಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಇಂದು ನಡೆದಿದೆ.
ಶಾಸಕ ಮಂಜುನಾಥ್
ಶಾಸಕ ಮಂಜುನಾಥ್
Updated on

ರಾಮನಗರ: ರಾಜ್ಯಾದ್ಯಂತ ಎಣ್ಣೆ ಅಂಗಡಿ ಓಪನ್ ಆಗುತ್ತಿದ್ದಂತೆ ಕುಡುಕರ ಗಲಾಟೆ, ಗದ್ದಲ, ಜೋರಾಗಿ ಸದ್ದು ಮಾಡುತ್ತಿದೆ. ಕುಡಿದ ಮತ್ತಿನಲ್ಲಿ ಗ್ರಾಮಸ್ಥರೊಬ್ಬರು ಆವಾಜ್ ಹಾಕಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಇಂದು ನಡೆದಿದೆ.

ಮಾಗಡಿ ತಾಲೂಕಿನ ಬಸವನಪಾಳ್ಯದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಶಾಸಕರು ಆಗಮಿಸಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಶಾಸಕರು ಹಾಗೂ ಗ್ರಾಮಸ್ಥನ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಎರಡು ಬಣದ ನಡುವೆ ಸ್ವಲ್ಪ ಮಟ್ಟಿನ ವಾಗ್ವಾದ ನಡೆದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಹಾಲಿನ ಡೇರಿ ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿದ್ದಕ್ಕೆ ಕುಡಿದು ತಮ್ಮ ಮೇಲೆ ಆವಾಜ್ ಹಾಕಿರುವ ಗ್ರಾಮಸ್ಥನ ವಿರುದ್ಧ ದೂರು ನೀಡಿರುವುದಾಗಿ ಶಾಸಕ ಮಂಜುನಾಥ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com