ಮೂಡಬಿದಿರೆ: ಕ್ವಾರಂಟೈನ್ ನಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಢ

ಕೊರೋನಾ ಇದೆ ಎಂಬ ಭಯದಿಂದ ಕ್ವಾರಂಟೈನ್ ನಲ್ಲಿದ್ದಾಗಲೇ ಆತ್ಮಹತ್ಯೆಗೆ ಶರಣಾಗಿದ್ದ ವ್ಯಕ್ತಿಗೆ ಕೋವಿಡ್ ಇರುವುದು ಸಾಬೀತಾಗಿದೆ. 
ಮೂಡಬಿದಿರೆ: ಕ್ವಾರಂಟೈನ್ ನಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಢ
Updated on

ಮೂಡಬಿದಿರೆ: ಕೊರೋನಾ ಇದೆ ಎಂಬ ಭಯದಿಂದ ಕ್ವಾರಂಟೈನ್ ನಲ್ಲಿದ್ದಾಗಲೇ ಆತ್ಮಹತ್ಯೆಗೆ ಶರಣಾಗಿದ್ದ ವ್ಯಕ್ತಿಗೆ ಕೋವಿಡ್ ಇರುವುದು ಸಾಬೀತಾಗಿದೆ. 

ಮುಂಬೈನಿಂದ ಮರಳಿ ಬಂದ ವ್ಯಕ್ತಿಯನ್ನು ಇಲ್ಲಿ ಕ್ವಾರಂಟಿನ್ ನಲ್ಲಿರಿಸಲಾಗಿತ್ತು. ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮೂಡಬಿದಿರೆ ಸಮೀಪದ ಕಡಂಡಲೆ ನಿವಾಸಿಯಾಗಿದ್ದರು. 

ಮೇ 21 ರ ಗುರುವಾರ ಮುಂಜಾನೆ 1 ಗಂಟೆ ಸುಮಾರಿಗೆ ಕಡಂಡಲೆ ಶಾಲೆಯಲ್ಲಿ ಈತನನ್ನು ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಆ ವ್ಯಕ್ತಿ ಬೆಳಗಿನ ಜಾವ 3 ಗಂಟೆಗೆ ಆತ್ಮಹತ್ಯೆಗೆ ಶರಣಾಗಿದ್ದ.

ಮೃತನ ಸ್ವ್ಯಾಬ್ ಅನ್ನು ಅದೇ ದಿನ ಪರೀಕ್ಷಿಸಲಾಯಿತು. ಇಂದು ಆ ವರದಿ ಬಂದಿದ್ದು ಸೋಂಕು ದೃಢಪಟ್ಟಿದೆ. ಮೃತನ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬೋಳೂರು ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com