ನಟ ಮಂಡ್ಯ ರಮೇಶ್ ತಂದೆ ಎನ್ ಸುಬ್ರಮಣ್ಯಂ ನಿಧನ

ನಟ ಮತ್ತು ರಂಗಭೂಮಿಕಲಾವಿದರೂ ಆಗಿರುವ ಮಂಡ್ಯ ರಮೇಶ್ ಅವರ ತಂದೆ ಎನ್ ಸುಬ್ರಮಣ್ಯಂ(90) ಶುಕ್ರವಾರ ನಿಧನರಾದರು. 
ಎನ್ ಸುಬ್ರಮಣ್ಯಂ
ಎನ್ ಸುಬ್ರಮಣ್ಯಂ
Updated on

ನಟ ಮತ್ತು ರಂಗಭೂಮಿಕಲಾವಿದರೂ ಆಗಿರುವ ಮಂಡ್ಯ ರಮೇಶ್ ಅವರ ತಂದೆ ಎನ್ ಸುಬ್ರಮಣ್ಯಂ(90) ಶುಕ್ರವಾರ ನಿಧನರಾದರು.

ಮಂಡ್ಯ ರಮೇಶ್ ಸ್ಥಾಪಿಸಿದ ನಾಟಕ ಸಂಘದ ಅಧ್ಯಕ್ಷರೂ ಆಗಿದ್ದ ಸುಬ್ರಮಣ್ಯಂ ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದರು

40 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಸುಬ್ರಮಣ್ಯಂ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಸಕ್ರಿಯವಾಗಿದ್ದರು. ಮಂಡ್ಯ ಮತ್ತು ಮೈಸೂರಿನಲ್ಲಿ ಸಾಹಿತ್ಯ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿಸುತ್ತಾ ಇದ್ದ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. 

ಅವರು ನಿವೃತ್ತಿಯ ನಂತರ ಶಂಕರ ಮಠ, ಮಂಡ್ಯ, ಬಡಗನಾಡು ಸಂಸ್ಥೆ ಮತ್ತು ವಿವಿಧ ಸಾಹಿತ್ಯ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದರು

ಮೃತರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳಿದ್ದಾರೆ.

ಮೃತರ ಅಂತ್ಯಕ್ರಿಯೆ ಚಾಮುಂಡಿ ಬೆಟ್ತದ ತಪ್ಪಲಿನಲ್ಲಿರುವ ಶವಾಗಾರದಲ್ಲಿ ನೆರವೇರಿತು. ಮಂಡ್ಯ ರಮೇಶ್ ಅವರ ರಂಗಭೂಮಿ ಸ್ನೇಹಿತರು ಮತ್ತು ನಟಾನ ಹಿತೈಷಿಗಳು ಸುಬ್ರಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com