ಬಿಎಂಆರ್ ಡಿಎ ನೂತನ ಆಯುಕ್ತರಾಗಿ ಐಎಫ್ಎಸ್ ಅಧಿಕಾರಿ ಗಿರೀಶ್ ಹೊಸೂರ್ ನೇಮಕ

ಕಳೆದ ಏಪ್ರಿಲ್ ನಲ್ಲಿ ಸಿಎಂ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಗಿರೀಶ್ ಹೊಸೂರ್ ಅವರನ್ನು ಬಿಎಂಆರ್ ಡಿಎ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಗಿರೀಶ್ ಹೊಸೂರ್
ಗಿರೀಶ್ ಹೊಸೂರ್

ಬೆಳಗಾವಿ: ಕಳೆದ ಏಪ್ರಿಲ್ ನಲ್ಲಿ ಸಿಎಂ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಗಿರೀಶ್ ಹೊಸೂರ್ ಅವರನ್ನು ಬಿಎಂಆರ್ ಡಿಎ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನವರಾದ ಗಿರೀಶ್ 1996ರ ಬ್ಯಾಚಿನ ಐಎಫ್ ಎಸ್ ಅಧಿಕಾರಿಯಾಗಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಪಿ ವಸಂತ್ ಕುಮಾರ್ ಗಿರೀಶ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಮಾನವ ಸಂಪನ್ಮೂಲ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಮತ್ತು  ಬೆಳಗಾವಿಯ ಡೆಪ್ಯೂಟಿ ಕನ್ಸರ್ವೇಟರ್ ಆಗಿ ಕೆಲಸ ನಿರ್ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com